Advertisement

ತುಳು ಸಂಘ ಬೊರಿವಲಿ: ತುಳು ಸಂಘಟನೆಗಳಿಗೆ ಸಮ್ಮಾನ

04:44 PM Mar 16, 2017 | |

ಮುಂಬಯಿ: ತುಳು ಸಂಘ ಬೊರಿವಲಿ ವತಿಯಿಂದ ಆರನೆಯ ವಾರ್ಷಿಕೋತ್ಸವ ಸಂಭ್ರಮವು ಮಾ. 11ರಂದು ಬೊರಿವಲಿ ಪಶ್ಚಿಮದ ಗ್ಯಾನ್‌  ಸಾಗರ್‌  ಹಂಪಿ ಥೀಯೆಟರ್‌ನಲ್ಲಿ ನಡೆಯಿತು.

Advertisement

ಕಳೆದ ಹಲವಾರು ವರ್ಷಗಳಿಂದ ನಗರದಲ್ಲಿ ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತುಳು ಬಾಂಧವರ ಅನೇಕ ಸಂಘಟನೆಗಳು ಕಾರ್ಯ ನಿರತರಾಗಿದ್ದು ಅದರಲ್ಲಿ ಸ್ಥಳೀಯ ತುಳು ಸಂಘಟನೆಗಳಾದ ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ  ಕಾರ್ಯಾಧ್ಯಕ್ಷ  ವಿಜಯ್‌ ಆರ್‌. ಭಂಡಾರಿ ಮತ್ತು   ಬಿಲ್ಲವರ ಅಸೋಸಿಯೇಶನ್‌ ಬೊರಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಸುಂದರ ಎಂ. ಪೂಜಾರಿ ಅವರನ್ನು ಉಪಸ್ಥಿತರಿದ್ದ ಅತಿಥಿಗಳು ಹಾಗೂ ಸಂಘದ ಪದಾಧಿಕಾರಿಗಳು ಸಮ್ಮಾನಿಸಿ ಶುಭ ಹಾರೈಸಿದರು. ಸಮ್ಮಾನಿತರನ್ನು ಅಂಜನಾ ಮಹೇಶ್‌  ಶೆಟ್ಟಿ ಪರಿಚಯಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭೆಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೋಂಬೆ ಬಂಟ್ಸ್‌ ಅಸೋಸಿಯೇಶನಿನ ಮಾಜಿ ಅಧ್ಯಕ್ಷ, ನ್ಯಾಯವಾದಿ ರತ್ನಾಕರ ವಿ. ಶೆಟ್ಟಿ ಅವರು ಮಾತನಾಡಿ, ತುಳು ಸಂಘಟನೆಯು ನಮ್ಮೆಲ್ಲರನ್ನು ಒಟ್ಟುಗೂಡಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅಭಿನಂದ ನೀಯ. ಇಂದಿನ ಜನಾಂಗವು ಶಾಲಾ ಕಾಲೇಜು, ಟಿವಿ, ವಾಟ್ಸಪ್‌ಗ್ಳಂತಹ ಆಧುನಿಕ ತಂತ್ರಜ್ಞಾನದಲ್ಲಿ ತನ್ನ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದು ಅದು ಮಾತೃ ಸಂಸ್ಕೃತಿಗೆ ಮಾರಕವಾಗದಿರಲಿ. ಮಕ್ಕಳನ್ನು ಇಂತಹ ಕಾರ್ಯಕ್ರಮಕ್ಕೆ ತರುವುದರಿಂದ ನಮ್ಮ ಮಾತೃ ಸಂಸ್ಕೃತಿಯನ್ನು ಅವರಿಗೆ ತಿಳಿಸಿದಂತಾಗುವುದು ಎಂದು ಸಂಘದಎಲ್ಲಾ ಅಧ್ಯಕ್ಷರನ್ನು ಹಾಗೂ ಪದಾಧಿ ಕಾರಿಗಳನ್ನು ಅಭಿನಂದಿಸಿದರು.

ತುಳು ಸಂಘ ಬೊರಿವಲಿ ಅಧ್ಯಕ್ಷ ಪೇಟೆಮನೆ ಪ್ರಕಾಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಉದ್ಯಮಿ, ಸಮಾಜ ಸೇವಕ ಬಿಲ್ಲವರ ಅಸೋಸಿಯೇಶನ್‌ ಮುಂಬಯಿಯ ಮಾಜಿ ಅಧ್ಯಕ್ಷ ಎಲ…. ವಿ. ಅಮೀನ್‌  ಮತ್ತು ಬಂಟರ ಸಂಘ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ಕೊಂಡಾಡಿ ಪ್ರೇಮನಾಥ ಶೆಟ್ಟಿ ಸಂಘದ ಸಿದ್ಧಿ-ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ವಿಜಯ ಆರ್‌. ಭಂಡಾರಿ ಅವರು, ಪೇಟೆಮನೆ ಪ್ರಕಾಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಆರನೆಯ ವಾರ್ಷಿಕೋತ್ಸವ ಸಮಾರಂಭ ನಡೆಯುತ್ತಿದ್ದು, ಎಲ್ಲ ತುಳು ಬಾಂಧವರನ್ನು ಒಟ್ಟುಗೂಡಿಸುವ ಸಾಧನೆ ಇಂದಿನ ಸಭೆಯನ್ನು ನೋಡುವಾಗ ತಿಳಿಯುತ್ತಿದೆ. ಶಿಕ್ಷಣಕ್ಕೆ ಪೊ›àತ್ಸಾಹ,  ಪರಿಸರದ ಜನರನ್ನು ಕೂಡಿಸುವ ಇಂತಹ ಕಾರ್ಯದಿಂದ ಮನೆ ಹಾಗೂ ಪರಿಸರ ಸುಧಾರಣೆಗೊಳ್ಳುವುದು. ತುಳು ಸಮಾಜ ಬಾಂಧವರ ಎಲ್ಲಾ ಸಂಘಟನೆಗಳು ತುಳು ತಾಯಿಯ ಸಂಘಟನೆಗಳಾಗಿದೆ. ಇಂತಹ ಉತ್ತಮ ಕೆಲಸಗಳು ಮುಂದುವರಿಯುತ್ತಿರಲಿ ಎಂದರು.

ಇನ್ನೋರ್ವ ಸಮ್ಮಾನಿತ  ಸುಂದರ ಎಂ. ಪೂಜಾರಿ ಅವರು ಮಾತನಾಡಿ, ತುಳು ಭಾಷೆ ನಮ್ಮೆಲ್ಲರ ಮಾತೃ ಭಾಷೆ. ಇಂತಹ ಸಂಘಟನೆಗಳು ಮಾತ್ರವಲ್ಲದೆ ಜಾತೀಯ ಸಂಘಟನೆಗಳಿಂದ ತುಳು ಭಾಷೆಯ ಪ್ರಗತಿ ಸಾಧ್ಯ. ನಮ್ಮ ಮಕ್ಕಳಿಗೆ ತುಳು ಸಂಸ್ಕೃತಿ ಹಾಗೂ ಭಾಷೆಯ ಅರಿವು ಆಗಬೇಕಾಗಿದೆ. ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯುತ್ತಿದ್ದರೂ ಮಾತೃ ಭಾಷೆಯ ತಿಳಿವು ಎಲ್ಲರಿಗೂ ಅತೀ ಅಗತ್ಯ. ಜಾತೀಯ ಸಂಘಟನೆಗಳು ತುಳು ಭಾಷೆಯನ್ನು ಮರೆತಿಲ್ಲ. ತುಳುವನ್ನು ಬಿಡಲಿಲ್ಲ. ತುಳು ಭಾಷೆಯ ಅಭಿವೃದ್ಧಿಗೆ ಇಂತಹ ಸಂಘಗಳಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದರು.

Advertisement

ಮಹಿಳಾ ವಿಭಾಗದವರಿಂದ ಅರಸಿನ ಕುಂಕುಮ ಮಾತ್ರವಲ್ಲದೆ  ಸದಸ್ಯರಿಂದ ಹಾಗೂ ಮಕ್ಕಳಿಂದ ವಿವಿಧ ಮನೋರಂಜನ ಕಾರ್ಯಕ್ರಮ ನಡೆಯಿತು. ಮನೋರಂಜನಾ ಕಾರ್ಯಕ್ರಮವನ್ನು ಸಂಘದ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಹರಿಣಾ ಆರ್‌. ಶೆಟ್ಟಿ ಅವರು ನಿರ್ವಹಿಸಿದರು. ಸದಸ್ಯತನ ಕಾರ್ಯಾಧ್ಯಕ್ಷೆ ಸುಮತಿ ಸಿ. ಸಾಲ್ಯಾನ್‌, ಕ್ರೀಡಾ ಕಾರ್ಯಾಧ್ಯಕ್ಷೆ ಶೋಭಾ ಸಿ. ಶೆಟ್ಟಿ ಮತ್ತಿರರು ಸಹಕರಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರಭಾಕರ ಬಿ. ಶೆಟ್ಟಿ, ಕೋಶಾಧಿಕಾರಿ ರಜಿತ್‌ ಎಲ್‌. ಸುವರ್ಣ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ ಹರಿಣಾ ಆರ್‌. ಶೆಟ್ಟಿ, ಜೊತೆ ಕೋಶಾಧಿಕಾರಿ ಸವಿತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಅಭಿನಯ ಮಂಟಪ ಮುಂಬಯಿಯ ಕಲಾವಿದರಿಂದ ಕರುಣಾಕರ ಕಾಪು ನಿರ್ದೇಶನದ ತುಳು ನಾಟಕ ಒಯಿಕ್‌ ಲಾ ದಿನ ಬರೊಡು ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮವನ್ನು ಜೊತೆ ಕಾರ್ಯದರ್ಶಿ ಪ್ರವೀಣ್‌ ಆರ್‌. ಶೆಟ್ಟಿ ನಿರ್ವಹಿಸಿದ್ದು ಸಂಘದ ಗೌ. ಪ್ರಧಾನ ಕಾರ್ಯದರ್ಶಿ ಕರುಣಾಕರ ಎಂ. ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿ ಕೊನೆಗೆ ವಂದಿಸಿದರು.

ಚಿತ್ರ-ವರದಿ: ಈಶ್ವರ ಎಂ. ಐಲ್‌.

Advertisement

Udayavani is now on Telegram. Click here to join our channel and stay updated with the latest news.

Next