Advertisement

ಮಂಗಳವಾರದ ನಿಮ್ಮ ರಾಶಿಫಲ ಇಲ್ಲಿದೆ ಓದಿ

07:37 AM May 11, 2021 | Team Udayavani |

ಮೇಷ: ಹಂತಹಂತವಾಗಿ ಗೊಂದಲಗಳು ತಿಳಿಯಾಗಲಿವೆ. ಕೆಲವೊಮ್ಮೆ ಅದೃಷ್ಟದ ಆಸರೆ ಗೋಚರಕ್ಕೆ ಬರುತ್ತದೆ. ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಬೇಕು. ಜಾಗ್ರತೆ ಇರಲಿ.

Advertisement

ವೃಷಭ: ಸಾಂಸಾರಿಕವಾಗಿ ಹೊಂದಾಣಿಕೆಯು ಗಟ್ಟಿಯಾಗಿರಲಿ. ಹಿರಿಯರ ಹಾಗೂ ಮಕ್ಕಳ ಆರೋಗ್ಯ ಆಗಾಗ ಕೈಕೊಡಲಿದೆ. ಆರ್ಥಿಕ ಪರಿಸ್ಥಿತಿ ನಿಮ್ಮ ಲೆಕ್ಕಾಚಾರವನ್ನು ಹೊಂದಿಕೊಂಡು ಇರುತ್ತದೆ. ದೂರ ಸಂಚಾರದ ವಿಷಯ ಬೇಡ.

ಮಿಥುನ: ಚಾಲನೆಯಲ್ಲಿ ಗಮನವಿರಲಿ. ವಾಹನ ಖರೀದಿಗೆ ಅನುಕೂಲವಾಗಲಿದೆ. ಆಗಾಗ ಕೊಂಚ ಗೊಂದಲಕ್ಕೆ ಕಾರಣವಾಗುವ ತಾಪತ್ರಯವನ್ನು ಅನುಭವಿಸ ಬೇಕಾಗುತ್ತದೆ. ಸ್ವಯಂಕೃತ ಅಪರಾಧವನ್ನು ಮಾಡದಿರಿ.

ಕರ್ಕ: ವಿದ್ಯಾರ್ಥಿಗಳು, ನಿರುದ್ಯೋಗಿಗಳು ಹಾಗೂ ಅವಿವಾಹಿತರು ನಿರಾಶಾ ಮನೋಭಾವವನ್ನು ಹೊಂದಲಿ ದ್ದಾರೆ. ಅನಾವಶ್ಯಕವಾಗಿ ಹಿರಿಯರೊಡನೆ ವಾದ-ವಿವಾದಗಳಿಗೆ ಕಾರಣರಾಗದಿರಿ. ಹಿತಶತ್ರುಗಳ ನಡವಳಿಕೆ ಮೇಲೆ ಗಮನವಿರಲಿ.

ಸಿಂಹ :ಆಗಾಗ ಧನಾಗಮನದಿಂದ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ದೂರ ಸಂಚಾರದಲ್ಲಿ ಮಾತ್ರವಲ್ಲ ಚಾಲನೆಯಲ್ಲಿ ಕೂಡಾ ಜಾಗ್ರತೆ ಇರಲಿ. ಕಾರ್ಯಕ್ಷೇತ್ರದಲ್ಲಿ ಹಲವಾರು ವಾಸ್ತವ ಅವಕಾಶಗಳು ನಿಮಗೆ ಸಿಗಲಿದೆ.

Advertisement

ಕನ್ಯಾ: ಧನ ಸಂಗ್ರಹದಿಂದ ಋಣಬಾಧೆಯು ನಿವಾರಣೆಯಾಗಿ ಸಂತಸವಾಗಲಿದೆ. ಕೋರ್ಟುಕಚೇರಿ ಕಾರ್ಯಭಾಗದಲ್ಲಿ ಬಹು ಸಮಯದ ನಂತರ ನಿಮಗೆ ಯಶಸ್ಸು ಕಂಡುಬರಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ತುಲಾ: ದೂರಸಂಚಾರದಿಂದ ನಿಮ್ಮ ಮನೋಕಾಮನೆ ಗಳು ಸಿದ್ಧಿಯಾಗಲಿವೆ. ನವದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ತಂದೀತು. ಹೂಡಿಕೆ ವಿಸ್ತರಣೆಗಳು, ವ್ಯಾಪಾರ, ವ್ಯವಹಾರಗಳಿಗೆ ಅನುಕೂಲಕರವಾಗಲಿದೆ. ಶುಭವಿದೆ.

ವೃಶ್ಚಿಕ: ವ್ಯವಹಾರದಲ್ಲಿ ಆಗಾಗ ಹಿನ್ನಡೆಯನ್ನು ಅನುಭವಿಸಿ ದರೂ ಧನಾಗಮನವು ಪರಿಸ್ಥಿತಿಯನ್ನು ಸುಧಾರಿಸಲಿದೆ. ಕೆಲವೊಮ್ಮೆ ನಿಮ್ಮ ಪ್ರಯತ್ನಶೀಲತೆಗೆ ಮಹತ್ತರ ಬದಲಾವಣೆ ಕಂಡುಬರುವುದು. ಶುಭಮಂಗಲ ಕಾರ್ಯ ನಡೆದೀತು.

ಧನು: ಕಾರ್ಯರಂಗದಲ್ಲಿ ಹಾಗೂ ವೃತ್ತಿರಂಗದಲ್ಲಿ ಸಾವಧಾನ ದಿಂದ ಮುಂದುವರಿಯಬೇಕಾಗುತ್ತದೆ. ಅನಾವಶ್ಯಕ ಅಪವಾದ, ಅವಮಾನ ಕಿರಿಕಿರಿ ಪ್ರಸಂಗವನ್ನು ಎದುರಿಸಬೇಕಾದೀತು. ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸದಲ್ಲಿ ವಿಶ್ವಾಸವಿರಲಿ.

ಮಕರ: ಸಾಮಾಜಿಕ ಕ್ಷೇತ್ರದಲ್ಲಿ ಕೂಡಾ ಕೀರ್ತಿ ಹೆಚ್ಚಿ ಆದರಾದಿಗಳಿಗೆ ಪಾತ್ರರಾಗುವಿರಿ. ಜೊತೆಗೆ ಅದರಿಂದ ಆರ್ಥಿಕ ಅನುಕೂಲವೂ ಒದಗಿ ಬರುವುದು. ಅವಿವಾಹಿತರ ವೈವಾಹಿಕ ಭಾಗ್ಯಕ್ಕೆ ಅದೃಷ್ಟ ಖುಲಾಯಿಸಲಿದೆ. ಮುನ್ನಡೆಯಿರಿ.

ಕುಂಭ: ಆದಾಯ ಮಾರ್ಗಸೂಚಿಗೆ ಹಲವಾರು ಮಾರ್ಗ ಗಳು ಗೋಚರಕ್ಕೆ ಬಂದಾವು. ಸದುಪಯೋಗಿಸಿಕೊಳ್ಳಿರಿ. ಯಾವುದೇ ವಿಚಾರದಲ್ಲಿ ದುಡುಕು ವರ್ತನೆಗೆ ಕಾರಣರಾಗದಂತೆ ವರ್ತಿಸಿರಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಮುನ್ನಡೆ ಕಂಡಾರು.

ಮೀನ: ನಿರುದ್ಯೋಗಿಗಳ ಹಿನ್ನಡೆ ಅನಿರೀಕ್ಷಿತ ರೂಪದಲ್ಲಿ ನಿವಾರಣೆಯಾಗುತ್ತದೆ. ಶ್ರೀ ದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ. ಕೌಟುಂಬಿಕವಾಗಿ ಹಠಾತ್‌ ಏರಿಳಿತಗಳು ಕಂಡುಬಂದಾವು. ದೂರಸಂಚಾರದ ಅವಕಾಶ ಕಾರ್ಯಸಾಧನೆಗೆ ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next