Advertisement

ಮಂಗಳವಾರದ ರಾಶಿ ಫಲ : ಉತ್ತಮ ಧನಾರ್ಜನೆ ಇದ್ದರೂ ವಿಚಾರಿಸಿ ಕಾರ್ಯನಿರ್ವಹಿಸಿ

07:30 AM Oct 25, 2022 | Team Udayavani |

ಮೇಷ: ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಕಾರ್ಯನಿರ್ವಹಿಸಿದರೆ ಯಶಸ್ಸು. ಉದ್ಯೋಗ ದಲ್ಲಿ ಶ್ರಮ ಅಧಿಕ. ಧನಾರ್ಜನೆಗೆ ಕೊರತೆ ಇರದು. ಗೃಹೋಪಕರಣ ವಸ್ತು ಸಂಗ್ರಹದಲ್ಲಿ ಅನುಕೂಲ. ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಕಾಲ.

Advertisement

ವೃಷಭ: ಬರಹಗಾರರಿಗೆ, ಆಹಾರೋಧ್ಯಮಿ ಗಳಿಗೆ, ಪಾಲುದಾರಿಕಾ ವ್ಯವಹಾರಸ್ಥರಿಗೆ ಅನುಕೂಲಕರ ಸಮಯ. ದೂರ ಪ್ರದೇಶದ ಭೂ. ಕಟ್ಟಡ ವಾಹನಾದಿ ವಿಚಾರದಲ್ಲಿ ಬದಲಾವಣೆ. ಉನ್ನತ ಅಧಿಕಾರಕ್ಕಾಗಿ ಶ್ರಮ. ದಾಂಪತ್ಯ ಸುಖಕರ.

ಮಿಥುನ: ಸಂಶಯಕ್ಕೆ ಅವಕಾಶ. ಮಾಡದೇ ಕಾರ್ಯ ಕ್ಷೇತ್ರದಲ್ಲಿ ಯಶಸ್ಸಿಗೆ ಪ್ರಯತ್ನಿಸಿ ಸ್ಥಿರವಾದ ಧನಸಂಪತ್ತು. ಆರೋಗ್ಯದಲ್ಲಿ ಗಮನಹರಿಸಿ. ಸಾಂಸಾರಿಕ ವಿಚಾರದಲ್ಲಿ ಸಮಾಧಾನದಿಂದ ಕಾರ್ಯನಿರ್ವಹಿಸಿ. ಪ್ರಯಾಣ ಲಾಭಕರ. ಉದ್ಯೋಗದಲ್ಲಿ ಬದಲಾವಣೆ.

ಕರ್ಕ: ಆರೋಗ್ಯದ ಬಗ್ಗೆ ಗಮನಿಸಿ. ಅಧಿಕ ದೈಹಿಕ ಶ್ರಮ. ಧನಾರ್ಜನೆ, ಮಿತ್ರರ ವಿಚಾರ, ಅಧ್ಯಯನ ವಿಚಾರ, ಉದ್ಯೋಗ, ಸ್ಥಾನ ಗೌರವ ಅಭಿವೃದ್ಧಿ. ಮಾತನಾಡುವಾಗ ಚರ್ಚೆಗೆ ಅವಕಾಶ ನೀಡದಿರಿ. ಗುರುಹಿರಿಯರೊಂದಿಗೆ ಸಂಯಮದಿಂದಿರಿ.

ಸಿಂಹ: ದೈಹಿಕ ಮಾನಸಿಕ ಒತ್ತಡವಿದ್ದರೂ ಸಹೋದರಾದಿಗಳಿಂದಲೂ ಕಾರ್ಮಿಕ ವರ್ಗದವರಿಂದ ಸಹಾಯ ಲಭಿಸಿ ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಧನಾರ್ಜನೆಗೆ ಕೊರತೆ ಆಗದು. ಪರರ ವಿಚಾರದಲ್ಲಿ ಜಾಗ್ರತೆಯಿಂದ ವ್ಯವಹರಿಸಿ.

Advertisement

ಕನ್ಯಾ: ಉತ್ತಮ ಧನಾರ್ಜನೆ ಇದ್ದರೂ ವಿಚಾರಿಸಿ ಕಾರ್ಯನಿರ್ವಹಿಸಿ. ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಪಾಲುದಾರಿಕಾ ಕ್ಷೇತ್ರದಲ್ಲಿ ಬದಲಾವಣೆ. ವಿದ್ಯಾರ್ಥಿಗಳು ಶ್ರಮ ವಹಿಸಿದರೆ ಉತ್ತಮ ಫ‌ಲ. ದಾಂಪತ್ಯದಲ್ಲಿ ಸಹಕಾರ ಪ್ರೋತ್ಸಾಹ ಅಗತ್ಯ. ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ.

ತುಲಾ: ಸುಖ ಸಂತೋಷದಿಂದ ಕೂಡಿದ ದಿನ. ಬಂಧು ಮಿತ್ರರ ಸಹಕಾರ ಪ್ರೋತ್ಸಾಹ. ವಾಹನ ಆಸ್ತಿ ವಿಚಾರದಲ್ಲಿ ಮುನ್ನಡೆ. ನಿರಂತರ ಧನಾರ್ಜನೆ. ಉತ್ತಮ ವಾಕ್‌ಚತುರತೆಯಿಂದಲೂ ಜವಾಬ್ದಾರಿಯಿಂದ ಕೂಡಿದ ಕಾರ್ಯ ವೈಖರಿ. ದಾಂಪತ್ಯ ಸುಖ ವೃದ್ಧಿ.

ವೃಶ್ಚಿಕ: ದೂರ ಸಂಚಾರ ಸಂಭವ. ಆರೋಗ್ಯ ಗಮನಿಸಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಒತ್ತಡ ಜವಾಬ್ದಾರಿ. ಧನಾರ್ಜನೆಗೆ ಕೊರತೆ ಆಗದು. ಅನ್ಯರಿಂದ ಸಹಾಯ ನಿರೀಕ್ಷಿಸದಿರಿ. ಗೃಹದಲ್ಲಿ ಶಾಂತಿ ಕಾಪಾಡಿ. ಅನಾವಶ್ಯಕ ಚರ್ಚೆಗೆ ಆಸ್ಪದ ನೀಡದಿರಿ.

ಧನು: ಕೆಲಸ ಕಾರ್ಯಗಳಲ್ಲಿ ಗೌರವ ಕೀರ್ತಿ ಸಂಪಾದನೆ ಪ್ರಗತಿ. ಹೆಚ್ಚಿದ ಸ್ಥಾನ ಧನ ಲಾಭ. ಉತ್ತಮ ವಾಕ್‌ಚತುರತೆ. ಗುರುಹಿರಿಯರ ಸಹಕಾರ ಪ್ರೋತ್ಸಾಹ. ಆರೋಗ್ಯ ವೃದ್ಧಿ. ಮಕ್ಕಳಿಂದ ಸರ್ವ ವಿಧದ ಸೌಲಭ್ಯ ಪ್ರಾಪ್ತಿ.

ಮಕರ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ಸಮಯ ಸಂದರ್ಭಕ್ಕೆ ಸರಿಯಾಗಿ ನಿಪುಣತೆ ಪ್ರದರ್ಶನ. ಬಂಧು ಮಿತ್ರರ ಸಹಕಾರ ಸಂತೋಷ. ದಂಪತಿಗಳಲ್ಲಿ ಅನ್ಯೂನ್ಯತೆಗೆ ಕೊರತೆಯಾಗ ದಂತೆ ವ್ಯವಹರಿಸಿ. ಮಕ್ಕಳ ಸಂತೋಷ ವೃದ್ಧಿ.

ಕುಂಭ: ಸಣ್ಣ ಪ್ರಯಾಣ ಸಂಭವ. ಸಹೋದರ ಸಮಾನರಿಂದಲೂ ಸಹೋದ್ಯೋಗಿ ಗಳಿಂದಲೂ ಸಹಕಾರ ಪ್ರಾಪ್ತಿ. ಉದ್ಯೋಗ ವ್ಯವಹಾರ ಗಳಲ್ಲಿ ಪರಿಶ್ರಮದಿಂದ ಯಶಸ್ಸು ಲಭ್ಯ. ಗೃಹೋಪಕರಣ ವಸ್ತುಗಳಿಗಾಗಿ ಧನ ವ್ಯಯ. ದಾಂಪತ್ಯ ತೃಪ್ತಿದಾಯಕ.

ಮೀನ: ಆರೋಗ್ಯ ವೃದ್ದಿ. ದೀರ್ಘ‌ ಪ್ರಯಾಣ ಸಂಭವ. ನೂತನ ಮಿತ್ರರ ಭೇಟಿ. ಕೆಲಸ ಕಾರ್ಯಗಳಲ್ಲಿ ಸರಿಯಾದ ನಿರ್ಣಯದಿಂದ ತೃಪ್ತಿ. ಪರರಿಂದ ಬರಬೇಕಾದ ಧನ ಪ್ರಾಪ್ತಿ. ಮಕ್ಕಳಿಂದ ಸಂತೋಷ. ಬಂಧು ಮಿತ್ರರಲ್ಲಿ ಸಂಯಮದಿಂದ ವ್ಯವಹರಿಸಿ.

Advertisement

Udayavani is now on Telegram. Click here to join our channel and stay updated with the latest news.

Next