Advertisement
ಸುನಾಮಿ ಹೊಡೆತಕ್ಕೆ ಸಿಲುಕಿರುವ ಎರಡು ನಗರಗಳಾದ ಪಾಲು ಮತ್ತು ಡೊಂಗ್ಗಾಲ ನಗರಗಳಲ್ಲಿ 540ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಶುಕ್ರವಾರದ ಭೂಕಂಪ ಹಾಗೂ ಸುನಾಮಿಯ ನಂತರ ಶನಿವಾರ ಕಾಣಿಸಿಕೊಂಡ ಮತ್ತೂಂದು ಸುತ್ತಿನ ಕಂಪನದಿಂದಾಗಿ, ಈ ಪ್ರಾಂತ್ಯದಲ್ಲಿ ಕನಿಷ್ಠ ಒಬ್ಬ ಮೃತಪಟ್ಟಿದ್ದಾನೆ.
ಈ ನೈಸರ್ಗಿಕ ವಿಕೋಪದ ಬಗ್ಗೆ ಮಾಹಿತಿ ನೀಡಿದ ಇಂಡೋನೇಷ್ಯಾದ ರಾಷ್ಟ್ರೀಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ (ಬಿಎನ್ಪಿಬಿ) ವಕ್ತಾರ ಸುಪೋಟೋ ಪುವೊì ನುಗ್ರಾಹೊ, “”ಕಳೆದೊಂದು ವರ್ಷದಿಂದ ನೆರೆಯ ದೇಶವಾದ ಗಿಲಿಯ ಸಮಾನಾಂತರ ರೇಖೆಯಲ್ಲಿ ಸಂಭವಿಸಿರುವ ಅನೇಕ ಭೂಕಂಪಗಳಿಂದ ಇಂಡೋನೇಷ್ಯಾದಲ್ಲಿ ಸುಮಾರು 555ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಪಾಲು ನಗರದಲ್ಲೇ 540 ಜನರು ಪ್ರಾಣ ತೆತ್ತಿದ್ದಾರೆ. ಇದೀಗ, ಮತ್ತೂಮ್ಮೆ ನಿಸರ್ಗ ತನ್ನ ಕರಾಳ ಹಸ್ತ ಚಾಚಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸುನಾಮಿಯಿಂದ ಕೆಲವಾರು ಪ್ರಾಂತ್ಯಗಳಲ್ಲಿ ಸಂವಹನ ತಂತ್ರಜ್ಞಾನಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಆದ ನಷ್ಟದ ಅಂದಾಜು ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ವಕಾರಾ ಸುಪೋಟೋ ತಿಳಿಸಿದರು.
Related Articles
ಅಸಂಖ್ಯ ಗಾಯಾಳುಗಳು ಆಸ್ಪತ್ರೆಗಳಲ್ಲಿ ಭರ್ತಿಯಾಗುತ್ತಿದ್ದು, ಯಾವುದೇ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಜಾಗವಿಲ್ಲ ದಂತಾಗಿದೆ. ಹಾಗಾಗಿ, ನೂರಾರು ಮಂದಿಗೆ ಆಸ್ಪತ್ರೆಯ ಆವರಣದಲ್ಲೇ ನೆಲದ ಮೇಲೆಯೇ ಮಲಗಿಸಿ ಶುಶ್ರೂಷೆ ನೀಡಲಾಗುತ್ತಿದೆ. ಪಾಲು ನಗರದ ಅಲ್ಲಲ್ಲಿ ಅರ್ಧ ಮುಖ ಮುಚ್ಚಿಕೊಂಡಿರುವ ಪಾರ್ಥಿವ ಶರೀರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದರ ನಡುವೆಯೇ ವ್ಯಕ್ತಿಯೊಬ್ಬ, ಕೆಸರು ಮೆತ್ತಿದ ತನ್ನ ಮೃತ ಮಗುವಿನ ಶವವನ್ನು ಹೆಗಲ ಮೇಲೆ ಹೊತ್ತು ರೋದಿಸಿಕೊಂಡು ಹೋಗುತ್ತಿದ್ದ ದೃಶ್ಯವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗಿ ಎಲ್ಲರ ಮನ ಕಲಕಿದೆ. ಶುಕ್ರವಾರ ಸಂಭವಿಸಿದ ಭೂಕಂಪದ ನಂತರವೂ ಪಾಲು ನಗರ ಹಾಗೂ ಸುತ್ತಿನ ಪ್ರಾಂತ್ಯಗಳಲ್ಲಿ 100ಕ್ಕಿಂತಲೂ ಲಘು ಕಂಪನಗಳು ಅನುಭವಕ್ಕೆ ಬಂದಿವೆ ಎಂದು ಆ ಪ್ರಾಂತ್ಯದ ನಾಗರಿಕರು ಹೇಳಿದ್ದಾರೆ.
Advertisement