Advertisement

ಟಿಆರ್ ಪಿ ಹಗರಣ: ಮುಂಬೈ ಪೊಲೀಸರ ವಿರುದ್ಧದ ರಿಪಬ್ಲಿಕ್ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

06:04 PM Oct 15, 2020 | Nagendra Trasi |

ನವದೆಹಲಿ: ಟೆಲಿವಿಷನ್ ರೇಟಿಂಗ್ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ವಿರುದ್ಧ ಮುಂಬೈ ಪೊಲೀಸರ ತನಿಖೆ ಪ್ರಶ್ನಿಸಿ  ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಗುರುವಾರ(ಸೆಪ್ಟೆಂಬರ್ 15,2020) ನಿರಾಕರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ.

Advertisement

ಸುಪ್ರೀಂಕೋರ್ಟ್ ನ ಜಸ್ಟೀಸ್ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ, ರಿಪಬ್ಲಿಕ್ ಚಾನೆಲ್ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಮುನ್ನ ಬಾಂಬೆ ಹೈಕೋರ್ಟ್ ಗೆ ಹೋಗುವಂತೆ ತಿಳಿಸಿದೆ.

ನಿಮ್ಮ ಚಾನೆಲ್ ಕಚೇರಿ ಇರುವುದು ವರ್ಲಿಯಲ್ಲಿ. ವರ್ಲಿಯ ಫ್ಲೋರಾ ಫೌಂಟೈನ್ ಬಾಂಬೆ ಹೈಕೋರ್ಟ್ ಸಮೀಪದಲ್ಲಿಯೇ ಇದೆ. ನಮಗೆ ನಮ್ಮ ಹೈಕೋರ್ಟ್ ಗಳ ಮೇಲೆ ವಿಶ್ವಾಸವಿದೆ ಎಂದು ಜಸ್ಟೀಸ್ ಚಂದ್ರಚೂಡ್ ತಿಳಿಸಿದ್ದಾರೆ.

ಅಲ್ಲದೇ ಪೊಲೀಸ್ ಅಧಿಕಾರಿಗಳು ಚಾನೆಲ್ ಗಳಿಗೆ ಹೋಗುವ ಪ್ರವೃತ್ತಿ ನಿಲ್ಲಿಸಬೇಕು ಎಂದು ಜಡ್ಜ್ ಈ ಸಂದರ್ಭದಲ್ಲಿ ಹೇಳಿದರು. ಪೊಲೀಸ್ ಕಮಿಷನರ್ ಗಳು ಇತ್ತೀಚೆಗಿನ ದಿನಗಳಲ್ಲಿ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ ಎಂದು ಈ ಸಂದರ್ಭದಲ್ಲಿ ಪರೋಕ್ಷ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next