Advertisement

ತ್ರಿವಳಿ ತಲಾಕ್‌ ಸಂತ್ರಸ್ತರು ಮೋದಿಗೆ ಮತ ಹಾಕುತ್ತಾರೆ : ಉತ್ತರ ಪ್ರದೇಶ ಸಚಿವ

08:55 AM May 07, 2019 | Sathish malya |

ಲಕ್ನೋ : ಶತಮಾನಗಳಷ್ಟು ಹಳೆಯ ಇಸ್ಲಾಮ್‌ ಪದ್ದತಿಯ ಬಗ್ಗೆ ವಿರೋಧ ಪಕ್ಷಗಳನ್ನು ಗುರಿ ಇರಿಸಿ ಪ್ರಧಾನಿ ಮೋದಿ ಅವರು ವಾಕ್‌ ದಾಳಿ ನಡೆಸಿದ 24 ತಾಸುಗಳ ಬಳಿಕ ಉತ್ತರ ಪ್ರದೇಶದ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಅವರು “ತ್ರಿವಳಿ ತಲಾಕ್‌ ಸಂತ್ರಸ್ತರು ನರೇಂದ್ರ ಮೋದಿಗೆ ಮತ ಹಾಕುತ್ತಾರೆ’ ಎಂದು ಹೇಳಿದರು.

Advertisement

ಪಿಟಿಐ ಜತೆಗೆ ಮಾತನಾಡುತ್ತಿದ್ದ ಅಲ್ಪಸಂಖ್ಯಾಕ ವ್ಯವಹಾರಗಳ ಸಚಿವ ಚೌಧರಿ ಅವರು “ಮದ್ರಸ ವ್ಯವಸ್ಥೆಯಲ್ಲಿನ ಅನೇಕ ಶೈಕ್ಷಣಿಕ ಸುಧಾರಣೆಗಳು ಹಾಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲಾಭದಾಯಕವಾಗಲಿವೆ’ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ “ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಎಂಬ ಘೋಷ ವಾಕ್ಯ ಎಲ್ಲ ಮತ ಧರ್ಮ ಸಮುದಾಯಗಳ ಜನರನ್ನು ದೇಶಾಭಿವೃದ್ಧಿಯಲ್ಲಿ ಯಾವುದೇ ತಾರತಮ್ಯವಿಲ್ಲದೆ ತೊಡಗಿಸಿಕೊಳ್ಳುವ ಮಹೋನ್ನತ ಧ್ಯೇಯೋದ್ದೇಶ ಹೊಂದಿರುವುದರಿಂದ ಮುಸ್ಲಿಮರು ಕೂಡ ಆದಕ್ಕೆ ಕೈಜೋಡಿಸುತ್ತಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next