Advertisement

West Bengal: ಅಪರಿಚಿತರಿಂದ ಟಿಎಂಸಿ ನಾಯಕ ಸತ್ಯನ್ ಚೌಧರಿ ಗುಂಡಿಕ್ಕಿ ಹತ್ಯೆ

04:21 PM Jan 07, 2024 | Team Udayavani |

ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸತ್ಯನ್ ಚೌಧರಿ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಬಹರಂಪುರದಲ್ಲಿ ಭಾನುವಾರ(ಜ.7 ರಂದ) ಘಟನೆ ನಡೆದಿದೆ.

Advertisement

ಸತ್ಯನ್ ಚೌಧರಿ ಅವರು ತನ್ನ ನಿವಾಸದ ಬಳಿಯಿರುವ ಅಂಗಡಿಯೊಂದರಲ್ಲಿ ಕೂತಿದ್ದರು. ಈ ವೇಳೆ ಬೈಕ್‌ ನಲ್ಲಿ ಬಂದ ಅಪರಿಚಿತರು ಸತ್ಯನ್‌ ಅವರ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿ ಆಗಿದ್ದಾರೆ. ಕೂಡಲೇ ಸತ್ಯನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಗಂಭೀರ ಸ್ವರೂಪದ ಗಾಯದಿಂದ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿರುವುದಾಗಿ ವರದಿ ತಿಳಿಸಿದೆ.

ಚೌಧರಿ ಅವರು ಈ ಹಿಂದೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದರು. ಆ ಬಳಿಕ ಅವರು ಆಡಳಿತಾರೂಢ ಟಿಎಂಸಿಗೆ ಸೇರ್ಪಡೆಗೊಂಡಿದ್ದರು.

ಸದ್ಯ ಕೃತ್ಯವೆಸಗಿ ಪರಾರಿ ಆಗಿರುವ ಆರೋಪಿಗಳ ಹುಡುಕಾಟ ಶುರುವಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next