Advertisement

ಕೆಎಂಎಫ್ ನಿಂದ ಪುನೀತ್‌ಗೆ ಗೌರವ

03:09 PM Oct 29, 2022 | Team Udayavani |

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಇದೀಗ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದೆ.

Advertisement

ಪುನೀತ್‌ ರಾಜ್‌ಕುಮಾರ್‌ ಅಭಿಯನದ ಕೊನೆಯ ಚಿತ್ರ “ಗಂಧದಗುಡಿ’ ಶುಕ್ರವಾರ ಬಿಡುಗಡೆ ಆಗಿದ್ದು ಆ ಹಿನ್ನೆಲೆಯಲ್ಲಿ ಕೆಎಂಎಫ್ ತನ್ನ ಹಾಲಿನ ಪ್ಯಾಕೆಟ್‌ ಮೇಲೆ ಗಂಧದ ಗುಡಿ ಸಿನಿಮಾದ ಹೆಸರು ಮುದ್ರಿಸಿ ಪ್ರಚಾರ ನೀಡುತ್ತಿದೆ. ಆ ಮೂಲಕ ಅಪ್ಪುಗೆ ವಿಶೇಷ ಗೌರವ ಸಲ್ಲಿಸಿದೆ. ಹಾಲಿನ ಪ್ಯಾಕೆಟ್‌ ಮೇಲೆ “ಗಂಧದಗುಡಿ – ಜರ್ನಿ ಆಫ್ ಎ ಟ್ರೂ ಹೀರೋ’ ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ. ಮುಂದಿನ 15 ದಿನಗಳ ಕಾಲ ನಂದಿನಿ ಹಾಲಿನ ಪ್ಯಾಕೆಟ್‌ ಮೇಲೆ ಗಂಧದ ಗುಡಿ ಚಿತ್ರದ ಶೀರ್ಷಿಕೆ ಇರಲಿದೆ.

ಈ ಹಿಂದೆ ಪುನೀತ್‌ ರಾಜ್‌ ಕುಮಾರ್‌ ಅವರು ಕೆಎಂಎಫ್‌ ಉತ್ಪನ್ನಗಳ ಬ್ರಾಂಡ್‌ ಅಂಬಾಸಿಡರ್‌ ಆಗಿದ್ದರು. ಹೀಗಾಗಿ ಕೆಎಂಎಫ್‌ ಈ ಮೂಲಕ ವಿಶೇಷವಾಗಿ ಗೌರವ ಸಲ್ಲಿಸಲು ಮುಂದಾಗಿದೆ ಎಂದು ಕೆಎಂಎಫ್ ನ  ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಹೇಳಿದ್ದಾರೆ.

ಕೆಎಂಎಫ್ ಉತ್ಪನ್ನಗಳ ಬಗ್ಗೆ ಪುನೀತ್‌ ಅವರು ವಿಶೇಷವಾದ ಪ್ರೀತಿ ಮತ್ತು ಅಭಿಮಾನ ಹೊಂದಿದ್ದರು. ಆ ಹಿನ್ನೆಲೆಯಲ್ಲಿಯೇ ಅವರು ಕೆಎಂಎಫ್ ಉತ್ಪನ್ನಗಳ ಬ್ರಾಂಡ್‌ ಅಂಬಾಸಿಡರ್‌ ಕೂಡ ಆಗಿದ್ದರು. ಇದೀಗ ಗಂಧದಗುಡಿ ಅವರ ಕೊನೆಯ ಚಿತ್ರವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ನೆನಪಿಸಿಕೊಳ್ಳುವ ಕೆಲಸ ಇದಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಡಾ.ರಾಜ್‌ಕುಮಾರ್‌ ಅವರು ಕೂಡ ನಂದಿನಿ ಹಾಲಿನ ಉತ್ಪನ್ನಗಳ ಬಳಕೆಗೆ ಕರೆ ನೀಡಿದ್ದರು. ರೈತರಿಗೆ ಒಳಿತಾಗುವ ಕೆಲಸ ಮಾಡಲು ಹಂಬಲಿಸಿದ್ದರು. ಆ ಬಳಿಕ ಪುನೀತ್‌ ಅವರು ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿದ್ದರು. ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಹಕಾರದಿಂದಾಗಿ ಈ ಕೆಲಸ ನಡೆದಿದೆ. ಪುನೀತ್‌ ರಾಜ್‌ಕುಮಾರ್‌ ಅವರಿಗೆ ಗೌರವ ಸಲ್ಲಿಸಲು ಹದಿನೈದು ದಿನ ನಂದಿನಿ ಪ್ಯಾಕೆಟ್‌ಗಳ ಮೇಲೆ ಗಂಧದ ಗುಡಿ ಚಿತ್ರದ ಶೀರ್ಷಿಕೆ ಇರಲಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next