Advertisement

ಕೋವಿಡ್ ವಾರಿಯರ್ಗೆ ಪುಷ್ಪ ನಮನ

01:40 PM May 21, 2020 | Suhan S |

ಹಾನಗಲ್ಲ: ಕಾಯಕ ಶ್ರದ್ಧೆಯಿಂದ ಕೋವಿಡ್  ಜಾಗೃತಿಗೆ ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರು, ತಾಲೂಕಿನ ವಿವಿಧ ಇಲಾಖೆ ನೌಕರರ ಶ್ರಮ ಸಾರ್ಥಕವಾಗಿದೆ. ಈ ಕಾರಣಕ್ಕಾಗಿಯೇ ಹಾನಗಲ್ಲ ತಾಲೂಕು ಕೋವಿಡ್ ಮುಕ್ತವಾಗಿರಲು ಸಾಧ್ಯವಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

Advertisement

ಕೋವಿಡ್ ವಾರಿಯರ್ಸ್ ಗೆ ಪುಷ್ಪ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕೋವಿಡ್ ಸಂದರ್ಭದಲ್ಲಿ ನಿಯಮಗಳನ್ನು ಉಲ್ಲಂಘಿಸಿದವರಿಂದ ಅತಿ ಹೆಚ್ಚು ದಂಡ ವಸೂಲಿ ಮಾಡಿದ ಜಿಲ್ಲೆನಮ್ಮದಾಗಿದೆ. ಜಿಲ್ಲೆಯ ಪೊಲೀಸರು ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸಿರುವುದಕ್ಕೆ ಇದು ಸಾಕ್ಷಿ. ಅಲ್ಲದೆ ಸಾರ್ವಜನಿಕರು ಕೂಡ ಪೊಲೀಸ್‌ ಕಾರ್ಯಾಚರಣೆಗೆ ಅಂಜುವಂತಹ ಸ್ಥಿತಿ ನಿರ್ಮಾಣವಾಗಿರುವುದು ಖೇದಕರ ಸಂಗತಿ. ನಮ್ಮ ಆರೋಗ್ಯಕ್ಕಾಗಿ ನಾವೇ ಜಾಗೃತವಾಗಬೇಕು. ಸಾಮಾಜಿಕ ಅಂತರ ಎನ್ನುವುದಕ್ಕಿಂತ ಶಾರೀರಿಕ ಅಂತರ ಎಂಬ ಪದ ಸರಿಯಾದುದು ಎಂದು ವ್ಯಾಖ್ಯಾನಿಸಿದರು. ಶಾಸಕ ಸಿ.ಎಂ. ಉದಾಸಿ, ತಾಲೂಕಾಡಳಿತದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next