Advertisement

ಭುವನೇಂದ್ರ ಕಿದಿಯೂರು ಅವರಿಗೆ ಗೌರವಾರ್ಪಣೆ

10:14 PM Jul 16, 2019 | sudhir |

ಮಲ್ಪೆ: ಕಿದಿಯೂರು ಶ್ರೀ ವಿಷ್ಣುಮೂರ್ತಿ ಮತ್ತು ವನದುರ್ಗಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಸಮಿತಿಯ ಗೌರವಾಧ್ಯಕ್ಷ, ಉಡುಪಿ ಕಿದಿಯೂರು ಹೋಟೆಲಿನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು ಅವರ 75ರ ಸಂಭ್ರಮದ ಪ್ರಯುಕ್ತ ಅವರನ್ನು ಸಮ್ಮಾನಿಸಿ, ಗೌರವಿಸುವ ಕಾರ್ಯಕ್ರಮ ಜು. 14ರಂದು ದೇವಸ್ಥಾನದಲ್ಲಿ ನಡೆಯಿತು.
ಶುಭಶಂಸನೆ ಮಾಡಿದ ಪ್ರೋ ರಾಧಾಕೃಷ್ಣ ಆಚಾರ್ಯ ಅವರು ಭುವನೇಂದ್ರ ಕಿದಿಯೂರು ಅವರು ಧಾರ್ಮಿಕ ವಾಗಿ, ಶೈಕ್ಷಣಿಕವಾಗಿ ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆ ಅನನ್ಯವಾದುದು. ಅವರ ಸೇವೆ ನಿರಂತರವಾಗಿ ನಡೆಯುವಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಅನುಗ್ರಹ ಸದಾ ಅವರ ಮೇಲಿರಲಿ ಎಂದು ಶುಭ ಹಾರೈಸಿದರು.

Advertisement

ಈ ಸಂದರ್ಭ ದೇವಸ್ಥಾನದ ಮೊಕೇ¤ಸರ ಕೆ. ಎಸ್‌. ಗೋಪಾಲಕೃಷ್ಣ ಭಟ್‌, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಕರ್ನಾಟಕ ಬ್ಯಾಂಕಿನ ಎಜಿಎಂ. ಗೋಪಾಲಕೃಷ್ಣ ಸಾಮಗ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಉಪಾಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್‌, ರಾಮಚಂದ್ರ ಕಿದಿಯೂರು, ಪ್ರಧಾನ ಕಾರ್ಯದಶಿ ಕೃಷ್ಣ ಕುಮಾರ್‌ ಶೆಟ್ಟಿ, ಸುಜಯ ಕುಮಾರ್‌, ದೇವಸ್ಥಾನದ ಅರ್ಚಕರಾದ ವಾಸುದೇವ ಭಟ್‌, ರಾಮಚಂದ್ರ ಭಟ್‌, ವಿಕ್ರಂ ಭಟ್‌, ವಾದಿರಾಜ್‌ ಭಟ್‌, ಆನಂದ ಭಟ್‌ ಮೊದಲಾದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್‌ ಕಿದಿಯೂರು ಅವರು ಸ್ವಾಗತಿಸಿದರು. ದಯಾನಂದ ಬಿ. ಅವರು ಕಾರ್ಯಕ್ರಮ ನಿರೂ ಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next