Advertisement

ಮಂಡ್ಯದಲ್ಲಿ  ಭೂ ಕಂಪನ?:ಶಬ್ಧ ಕೇಳಿ ಭಯಭೀತರಾದ ಜನತೆ!

05:16 PM Nov 29, 2018 | Team Udayavani |

ಮಂಡ್ಯ: ಜಿಲ್ಲೆಯ ಕೆಲ ಭಾಗಗಳಲ್ಲಿ ಗುರುವಾರ ಮಧ್ಯಾಹ್ನ 3.43 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾದ ಬಗ್ಗೆ ಜನರು ಹೇಳಿಕೊಂಡಿದ್ದಾರೆ. 

Advertisement

ಕಂಪನ ಅನುಭವವಾದ ವೇಳೆ ಭಾರೀ ಶಬ್ಧ ಕೇಳಿ ಬಂದಿದೆ ಮಂಡ್ಯ , ಪಾಂಡವಪುರ ಮತ್ತು ಕೆ.ಆರ್‌.ಪೇಟೆಯಲ್ಲಿ ಕಂಪನದ ಅನುಭವವಾಗಿದೆ ಎಂದು ಜನರು ಮಾಧ್ಯಮಗಳ ಎದುರು ಹೇಳಿಕೊಂಡಿದ್ದಾರೆ. 

ಕಂಪನದ ಅನುಭವವಾಗುತ್ತಿದ್ದಂತೆ ಜನರು ಮನೆಗಳಿಂದ,ಅಂಗಡಿಗಳು ಮತ್ತು ಕಚೇರಿಗಳಿಂದ  ಹೊರಗೆ ಓಡಿ ಬಂದಿದ್ದಾರೆ. ಇದೀಗ ಜನತೆ ತೀವ್ರ ಆತಂಕಕ್ಕೊಳಗಾಗಿದ್ದಾರೆ. 

ಕೆಆರ್‌ಎಸ್‌ ಸುತ್ತಮುತ್ತ ಸೆ.25ರಂದು ನಡುಕ ಹುಟ್ಟಿಸಿದ ಭಾರೀ ಶಬ್ಧ ಕೇಳಿ ಬಂದಿತ್ತು. ಅದು ಪಾಂಡವಪುರ ತಾಲೂಕು ಬೇಬಿ ಬೆಟ್ಟದ ಕಾವಲ್‌ ಪ್ರದೇಶದಲ್ಲಿ ಆದ ಗಣಿ ಸ್ಫೋಟದಿಂದ ಎನ್ನುವುದು ಖಚಿತಪಟ್ಟಿತ್ತು.

ಇಂದು ಇದೇ ಕಾರಣಕ್ಕಾಗಿ  ಕಂಪನದ ಅನುಭವವಾಗಿದೆಯೋ ಇಲ್ಲ  ಬೇರೆ ಕಾರಣಕ್ಕಾಗಿ ಕಂಪನ ಮತ್ತು ಸದ್ದು ಕೇಳಿಸಿದೆಯೋ  ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.

Advertisement

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next