Advertisement

ಬೆಂಗಳೂರು ನಗರದ ಹಲವೆಡೆ ಭೂಮಿ ಕಂಪಿಸಿದ ಅನುಭವ; ಆತಂಕದಲ್ಲಿ ಜನತೆ

12:59 PM Nov 26, 2021 | Team Udayavani |

ಬೆಂಗಳೂರು : ನಗರದ ಹಲವೆಡೆ ಶುಕ್ರವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿರುವುದು ಜನರು ಆತಂಕಕ್ಕೆ ಗುರಿಯಾಗುವಂತೆ ಮಾಡಿದೆ.

Advertisement

ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ರಾಜರಾಜೇಶ್ವರಿ ನಗರ, ಕಗ್ಗಲೀಪುರ, ಕೆಂಗೇರಿ, ಜ್ಞಾನ ಭಾರತಿ ಮೈಸೂರು ರಸ್ತೆಯ ಕೆಲ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಜನರಿಗೆ ಕಂಪನದ ಅನುಭವವಾಗಿದ್ದು, ಮನೆಯೊಳಗಿದ್ದ ವಸ್ತುಗಳು ಅಲುಗಾಡಿರುವುದಾಗಿ ವರದಿಯಾಗಿದೆ.

ರಾಮನಗರ ಮತ್ತು ಮಂಡ್ಯ ಸೇರಿದಂತೆ ರಾಜ್ಯದ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ವರದಿಯಾಗಿದೆ.

ಕೆಲ ದಿನಗಳಿಂದ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ನಿರಂತರವಾಗಿ ಭೂಮಿ ಕಂಪಿಸಿ ಜನರು ಆತಂಕಕ್ಕೆ ಗುರಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next