Advertisement

ಆನೆಗೊಂದಿ: ಕಸದ ರಾಶಿಗೆ ಬೆಂಕಿ; ಸುಟ್ಟು ಭಸ್ಮವಾದ ಬೇವಿನ ಮರಗಳು

07:38 PM May 06, 2022 | Team Udayavani |

ಗಂಗಾವತಿ :ತಾಲೂಕಿನ ಆನೆಗೊಂದಿ ಗ್ರಾಮದ ತಳವಾರಘಟ್ಟ ರಸ್ತೆಯಲ್ಲಿ ಸಾರ್ವಜನಿಕರು ಮತ್ತು ಎನ್ ಜಿಒ ಸಂಸ್ಥೆ ಅವರು ಹಾಕುತ್ತಿರುವ ಕಸದ ರಾಶಿಯಿಂದ ಪರಿಸರ ಮಾಲಿನ್ಯ ಉಂಟಾಗಿ, ಜತೆಗೆ ಕಸದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ರಸ್ತೆಯುದ್ದಕ್ಕೂ ಇದ್ದ ಬೇವಿನ ಮರಗಳು ಸುಟ್ಟು ಭಸ್ಮವಾಗಿವೆ. ಇದಕ್ಕೆ ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರು ಕಸ ಹಾಕಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ .

Advertisement

ಆನೆಗೊಂದಿ ಗ್ರಾಮದ ಸುತ್ತಲಿನ ರಸ್ತೆಗಳ ಉದ್ದಕ್ಕೂ ಸಾರ್ವಜನಿಕರು ಕಸವನ್ನು ಮತ್ತು ತಿಪ್ಪೆಗುಂಡಿಗಳನ್ನು ಹಾಕುತ್ತಿದ್ದಾರೆ ಇದರಿಂದ ಇಡೀ ಗ್ರಾಮ ಪರಿಸರ ಮಾಲಿನ್ಯದಿಂದ ನಾರುತ್ತಿದೆ .ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ ಕೂಡಲೇ ಸುತ್ತಲೂ ಇರುವ ಕಸದ ರಾಶಿ ಮತ್ತು ತಿಪ್ಪೆಗುಂಡಿಗಳ ಸ್ವಚ್ಛ ಮಾಡಬೇಕು .ಸಾರ್ವಜನಿಕರ ಜೀವ ಸಂಸ್ಥೆಯವರು ಕೆಟ್ಟ ರಸ್ತೆಯಲ್ಲಿ ನಿತ್ಯವೂ ಕಸದ ರಾಶಿಯನ್ನು ಹಾಕುತ್ತಿದ್ದು ಶುಕ್ರವಾರ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ರಸ್ತೆಯುದ್ದಕ್ಕೂ ಇದ್ದ ಬೇವಿನ ಮರಗಳು ಭಸ್ಮವಾಗಿವೆ ಜತೆಗೆ ಇಡೀ ದಿನ ಕಸದ ರಾಶಿಯ ಬೆಂಕಿಯ ಹೊಗೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು .

ಕೂಡಲೇ ಕಸ ಹಾಕುವವರನ್ನು ಶಿಕ್ಷಿಸಬೇಕು ಜತೆಗೆ ಕಸದ ಪರಿಣಾಮ ಮತ್ತು ರೋಗ ರುಜಿನು ಬಗ್ಗೆ ಸಾರ್ವಜನಿಕರಿಗೆ ಗ್ರಾ. ಪಂ. ನವರು ಜನಜಾಗೃತಿ ಮೂಡಿಸುವಂತೆ ಪರಿಸರ ಪ್ರೇಮಿಗಳು ಸಾರ್ವಜನಿಕರು ಒತ್ತಾಯಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next