Advertisement

ಬಾಳೆಗೊನೆಯೊಂದಿಗೆ  ಮರ ಸಾಗಾಟ: ಮೂವರ ಬಂಧನ

04:48 AM Feb 17, 2019 | Team Udayavani |

ಮಡಿಕೇರಿ: ಬಾಳೆಗೊನೆಯೊಂದಿಗೆ ಲಾರಿಯಲ್ಲಿ ಅಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಲಾರಿ ಸಹಿತ ಮೂವರನ್ನು ದಸ್ತಗಿರಿ ಬಂಧಿಸಿದ್ದಾರೆ.

Advertisement

ಶನಿವಾರ ಮುಂಜಾನೆ ಸುಂಟಿಕೊಪ್ಪ ಕಡೆಯಿಂದ ಬರುತ್ತಿದ್ದ ಲಾರಿಯನ್ನು ತಡೆಹಿಡಿದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂತು. 

ನೆಲ್ಲಿಹುದಿಕೇರಿಯ ರೆಹಮಾನ್‌, ಕೇರಳದ ಕಣ್ಣೂರಿನ ರಿಶದ್‌ ಕೊಟ್ರಕಾಂಡಿ, ನಿಕಿಲ್‌  ಅವರನ್ನು ಬಂಧಿಸಲಾಗಿದೆ. ಅಮ್ಮತ್ತಿ ಆನಂದ ಪುರದ ದೀಪಕ್‌ ವಾಲ್ಟರ್‌  ತಲೆಮರೆಸಿಕೊಂಡಿದ್ದಾನೆ ಎಂದು ವಲಯ ಅರಣ್ಯಾಧಿಕಾರಿ ಸಿ.ಆರ್‌.ಅರುಣ್‌ ತಿಳಿಸಿದ್ದಾರೆ.

ವಶಕ್ಕೆ ಪಡೆದ  ಲಾರಿ ಮತ್ತು ಮರದ  ಮೌಲ್ಯ  15 ಲ.ರೂ. ಎಂದು ಅಂದಾಜಿಸಲಾಗಿದೆ. ಮರವನ್ನು ಮಾದಾಪುರ ಕಡೆಯಿಂದ ಸಾಗಿಸುತ್ತಿರಬೇಕೆಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next