Advertisement

ಮರದಲ್ಲಿ ಅಡಗಿದ್ದ ಜವರಾಯ: ಕಾರು ಚಾಲಕ ದಾರುಣ ಸಾವು

12:24 PM Jan 02, 2022 | Team Udayavani |

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಅಡ್ಡಹೊಳೆ ಸಮೀಪದಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಇಂಜಿನ್ ಪರೀಕ್ಷಿಸುತ್ತಿದ್ದ ಕಾರಿನ ಚಾಲಕನ ಮೇಲೆ ಮರ ಬಿದ್ದು ದಾರುಣವಾಗಿ ಸಾವನ್ನಪಿದ ಘಟನೆ ನಡೆದಿದೆ.

Advertisement

ಮಂಗಳೂರಿನ ಪಾವಂಜೆಯಿಂದ ಕುಟುಂಬ ಸಮೇತ ಬೆಂಗಳೂರಿಗೆ ತೆರಳುತ್ತಿದ್ದ ಸುರೇಶ್ ನಾವಡ (40) ಮೃತ ದುರ್ದೈವಿ.

ಪತ್ನಿ ಹಾಗೂ ಇಬ್ಬರು ಮಕ್ಕಳು ಕಾರಿನಿಂದ ಕೆಳಗಿಳಿದಿದ್ದರು. ಸ್ಚಲ್ಪ ದೂರವಿದ್ದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಡುಪಿಯಿಂದ ಬೆಂಗಳೂರಿಗೆ ತೆರಳುತ್ತಿರುವ ವೇಲೆ ಅಡ್ಡಹೊಳೆ ಸಮೀಪ ಇಂಜಿನ್‍ನಲ್ಲಿ ಶಬ್ದ ಬಂದ ಹಿನ್ನೆಲೆ ಚಾಲಕ ಕಾರು ನಿಲ್ಲಿಸಿ, ಬಾನೆಟ್ ತೆರೆದು ಪರೀಕ್ಷಿಸುತ್ತಿದ್ಸದ ವೇಳೆ ದೂಪದ ಮರದ ಬೃಹತ್ ಕೊಂಬೆ ಏಕಾಏಕಿ ಬಿದ್ದಿದೆ.

ನೆಲ್ಯಾಡಿ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next