Advertisement

ಮಲ್ಲೇಶ್ವರಂ : ಮಳೆಗೆ ಉರುಳಿದ ಬೃಹತ್‌ ಮರ ; ತಪ್ಪಿದ ಭಾರೀ ಅನಾಹುತ 

05:05 PM Sep 16, 2018 | Team Udayavani |

ಬೆಂಗಳೂರು: ನಗರದಲ್ಲಿ  ಭಾನುವಾರ ಸಂಜೆ ಮಳೆ ಬಿರುಸಾಗಿ ಸುರಿಯುತ್ತಿದ್ದು, ಮಲ್ಲೇಶ್ವರಂನ 8 ನೇ ಕ್ರಾಸ್‌ನ ಜನನಿಭಿಡ ಪ್ರದೇಶದಲ್ಲಿ  ಬೃಹತ್‌ ಮರವೊಂದು ಉರುಳಿ ಬಿದ್ದಿದ್ದು , ಹಲವು ವಾಹನಗಳು ಜಖಂಗೊಂಡಿವೆ

Advertisement

ಕಾರುಗಳು, ಆಟೋ ರಿಕ್ಷಾ ಮತ್ತು ನಾಲ್ಕು ಬೈಕ್‌ಗಳು ಜಖಂ ಗೊಂಡಿದ್ದು, ಜ್ಯುವೆಲ್ಲರಿ ಶಾಪ್‌ಗ್ೂ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.ಇಬ್ಬರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದೆ. ಆಟೋ ರಿಕ್ಷಾದಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. 

ಬಿಬಿಎಂಪಿ ಸಿಬಂದಿಗಳು ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. 

ನಗರದ ವಿವಿಧ ಪ್ರದೇಶಗಳಲ್ಲಿ  ಭಾರೀ ಮಳೆ ಸುರಿಯುತ್ತಿದ್ದು , ಕೆಲವು ಕಡೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next