Advertisement

ಶಿಶಿಲ ಕೋಟೆಬಾಗಿಲು: ನಿಧಿ ಶೋಧ; ಸ್ಥಳೀಯರನ್ನು ಕಂಡು ಕಾಲ್ಕಿತ್ತ ಚೋರರು

03:08 PM Nov 04, 2018 | |

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಕೋಟೆಬಾಗಿಲು ಎಂಬಲ್ಲಿ ಪುರಾತನ ಕಾಲದ ಅಜೀರ್ಣ ವ್ಯವಸ್ಥೆಯಲ್ಲಿದ ಜೈನ ಬಸಧಿಯ ಅಡಿಪಾಯ ಅಗೆದು ನಿಧಿಗಾಗಿ ಶೋಧಾಚರಣೆ  ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ. 

Advertisement

ಶನಿವಾರ ರಾತ್ರಿ 8  ಗಂಟೆಗೆ ಸುಮಾರಿಗೆ  ಕೆಲವು ಅನುಮಾನಾಸ್ಪದ ವ್ಯಕ್ತಿಗಳು ತಿರುಗಾಡುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ತಡೆದು ಪ್ರಶ್ನಿಸಿದಾಗ ಮೀನು ಹಿಡಿಯಲು ಬಂದದ್ದೆಂದು ಹೇಳಿ ಜಾಗ ಖಾಲಿ ಮಾಡಿದ್ದಾರೆ. ಬಳಿಕ ಸ್ಥಳೀಯರು ಅನುಮಾನದಿಂದ ಈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.


ಬಸದಿಯ ಕಲ್ಲುಗಳನ್ನು ಸರಿಸಿ ಗುಂಡಿ ತೋಡಲಾಗಿದ್ದು, ಸ್ಥಳದಲ್ಲಿ ತೆಂಗಿನಕಾಯಿ, ಹೂವು, ವೀಳ್ಯದೆಲೆ ಮುಂತಾದ ಸಾಮಗ್ರಿಗಳು ಸಿಕ್ಕಿವೆ. ನಿಧಿ ಶೋಧಕ್ಕಿಂತ ಮೊದಲು ಪೂಜೆ ಮಾಡಿರಬಹುದು.  ಎರಡು   ದಿನಗಳಿಂದ ಈ ಕೃತ್ಯ ನಡೆಯುತ್ತಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. 

ಸ್ಥಳೀಯರು ವಾಹನದ ನೋಂದಣಿ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದು, ಧರ್ಮಸ್ಥಳ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next