Advertisement

ಕಾಂಗ್ರೆಸ್‌ನಿಂದ ದೇಶದ್ರೋಹ ಕೆಲಸ: ಡಿಸಿಎಂ ಕಾರಜೋಳ

09:35 AM Dec 24, 2019 | Team Udayavani |

ಬಾಗಲಕೋಟೆ: ಕಾಂಗ್ರೆಸ್‌ ಹಾಗೂ ಕೆಲವು ಸಂಘಟನೆಗಳು ದೇಶದ್ರೋಹದ ಕೆಲಸ ಮಾಡುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ನೆಪದಲ್ಲಿ ಅನವಶ್ಯಕವಾಗಿ ಶಾಂತಿ-ಸೌಹಾರ್ದ ಕದಕುವ ಕೆಲಸ ನಡೆಯುತ್ತಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದರು.

Advertisement

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇಡೀ ಸಂಸತ್‌ ಕಾನೂನಿಗೆ ತಿದ್ದುಪಡಿ ಮಾಡಿ ಒಪ್ಪಿಗೆ ನೀಡಿದೆ. ಮುಸ್ಲಿಂರಿಗೆ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್‌ನವರು ದೇಶಾದ್ಯಂತ ಹೇಳಿಕೊಂಡು ತಿರುಗುತ್ತಿದ್ದಾರೆ. ಕಾಂಗ್ರೆಸ್‌ಗೆ ಕೇವಲ ಓಟ್‌ ಬ್ಯಾಂಕ್‌ ಚಿಂತೆ. ಮುಸ್ಲಿಂ, ಹರಿಜನ, ಗಿರಿಜನರನ್ನು ಓಟ್‌ ಬ್ಯಾಂಕ್‌ ಮಾಡಿಕೊಂಡಿದ್ದಾರೆ ಹೊರತು ಮತ್ತೇನೂ ಮಾಡಿಲ್ಲ. ಮಾಜಿ ಸಚಿವ ಯು.ಟಿ. ಖಾದರ್‌ ಕಾಂಗ್ರೆಸ್‌ನ ಒಂದು ತುಣುಕು. ಓಟ್‌ ಬ್ಯಾಂಕ್‌ ರಾಜಕಾರಣ ಮಾತ್ರ ಅವರಿಗೆ ಗೊತ್ತಿದೆ. ಎಂಎಲ್‌ಎ ಆಗೋದು, ಗೆದ್ದು ಬರೋದು ಅಷ್ಟೇ ಗೊತ್ತಿದೆ. ಜ್ಞಾನದ ಕೊರತೆಯಿಂದ ಖಾದರ್‌ ಆ ರೀತಿ ಮಾತನಾಡಿದ್ದಾರೆ ಎಂದರು.

ಮಹಾರಾಷ್ಟ್ರದಲ್ಲಿ ಕಿಚಡಿ ಸರ್ಕಾರ:
ಮಹಾರಾಷ್ಟ್ರದಲ್ಲಿ ಬಹುಮತವಿಲ್ಲದ, ಮೂರು ಪಕ್ಷಗಳ ಕಿಚಡಿ ಸರ್ಕಾರ ಇದೆ. ಆ ಕಿಚಡಿ ಸರ್ಕಾರದ ಮುಖ್ಯಸ್ಥರೇ ಉದ್ಭವ್‌’ ಠಾಕ್ರೆ. ಜನರ ಭಾವನೆ ಬೇರೆಗೆ ತಿರುಗಿಸಲು ಇಂತಹ ಹೇಳಿಕೆ ನೀಡಿದ್ದಾರೆ ಹೊರತು, ಅವರಲ್ಲಿ ಯಾವುದೇ ಪ್ರಾಮಾಣಿಕ ಕಳಕಳಿ ಇಲ್ಲ. ಬೆಳಗಾವಿ ಯಾವತ್ತಿದ್ದರೂ ಕರ್ನಾಟಕದಲ್ಲೇ ಇರುತ್ತದೆ. ಈ ಭೂಮಿ ಮೇಲೆ ಜನ ಇರೋವರೆಗೂ ಬೆಳಗಾವಿ ಕನ್ನಡಿಗರದ್ದಾಗಿರುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next