Advertisement

ಹಠ ಮಾಡದೆ ಮುಷ್ಕರ ವಾಪಸ್ ಪಡೆಯಿರಿ : ಸಾರಿಗೆ ನೌಕರರಿಗೆ ಸಿಎಂ ಮನವಿ

06:11 PM Apr 06, 2021 | Team Udayavani |

ಹುಬ್ಬಳ್ಳಿ : ನಾಳೆ ರಾಜ್ಯಾದ್ಯಂತ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ  ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಹಠ ಮಾಡದೆ  ಮುಷ್ಕರವನ್ನು ವಾಪಸ್ಸು ಪಡೆಯಿರಿ ಎಂದಿದ್ದಾರೆ.

Advertisement

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ, ನೀವು ಸರ್ಕಾರದ ಮುಂದಿಟ್ಟರುವ 9 ಬೇಡಿಕೆಗಳಲ್ಲಿ 8ನ್ನು ಈಡೇರಿಸಿದ್ದೇವೆ. ಸಾರ್ವಜನಿಕ ಹಿತ ದೃಷ್ಟಿಯಿಂದ ನಾವೆಲ್ಲರೂ ದುಡಿಯಬೇಕು ಎಂದಿದ್ದಾರೆ.

ಸರ್ಕಾರ ಬಿಗಿಯಾಗಿ ಕ್ರಮ ಕೈಗೊಳ್ಳಲು ಅವಕಾಶ ಕೊಡಬೇಡಿ. ಮುಷ್ಕರದ ಹಿನ್ನೆಲೆಯಲ್ಲಿ ನಾವು ಈಗಾಗಲೇ ಪರ್ಯಾಯ ವ್ಯವಸ್ಥೆಯನ್ನು ಮಾಡಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next