Advertisement

ಮಧ್ಯಪ್ರದೇಶಕ್ಕೆ ಅತಂತ್ರ ಕಬ್ಬು ಕಟಾವು ಕಾರ್ಮಿಕರ ರವಾನೆ

06:20 PM Mar 03, 2022 | Team Udayavani |

ಜಮಖಂಡಿ: ವಿಜಯಪುರದ ಕಬ್ಬು ಕಟಾವು ಗ್ಯಾಂಗ್‌ಮನ್‌ ಅಪನಂಬಿಕೆಗೆ ಒಳಗಾಗಿದ್ದ ಮಧ್ಯಪ್ರದೇಶ ಮೂಲದ 9 ಮಕ್ಕಳು ಸಹಿತ 25 ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದು, ಇವರ ರಕ್ಷಣೆಗೆ ಮುಧೋಳ ತಾಲೂಕು ಆಡಳಿತ ಹಾಗೂ ಉಪವಿಭಾಗಾಧಿಕಾರಿ ಮುಂದಾಗಿದ್ದು, ಸಂಕಷ್ಟದಲ್ಲಿದ್ದವರನ್ನು ಮಧ್ಯಪ್ರದೇಶದ ಅವರ ಸ್ವಗ್ರಾಮಕ್ಕೆ ಕಳುಹಿಸಲಾಯಿತು.

Advertisement

ವಿಜಯಪುರದ ಗ್ಯಾಂಗ್‌ಮನ್‌ ರಾಠೊಡ ಎಂಬಾತನೊಂದಿಗೆ ಮಧ್ಯಪ್ರದೇಶದ ಕಾರ್ಮಿಕರು ಷರತ್ತುಗಳೊಂದಿಗೆ ಮುಧೋಳ ತಾಲೂಕಿನ ಪಿಎಂ ಬುದ್ನಿ ಗ್ರಾಮದಲ್ಲಿ ಕಬ್ಬು ಕಟಾವು ಮಾಡಲು ಆಗಮಿಸಿದ್ದರು. ನಿಗದಿತ ಅವಧಿ ಮುಗಿದು 21 ದಿನ ಕಳೆದರೂ ಮಧ್ಯಪ್ರದೇಶದಕ್ಕೆ ಕಳುಹಿಸಿಕೊಡದೇ ಎಲ್ಲ ಕಾರ್ಮಿಕರನ್ನು ಹೆಚ್ಚಿನ ಅವಧಿಗೆ ದುಡಿಸಿಕೊಂಡಿರುವ ವೇತನ ಕೂಡ ಕೊಡದೇ ಸತಾಯಿಸುತ್ತಿದ್ದ ಗ್ಯಾಂಗ್‌ ಮನ್‌ ತಲೆಮರೆಸಿಕೊಂಡಿದ್ದ.

ಮಧ್ಯಪ್ರದೇಶ ಕಾರ್ಮಿಕರು ತಮ್ಮ ಜಿಲ್ಲೆಯ ಸಂಸದ ಮತ್ತು ಆದಿವಾಸಿ ಬುಡಕಟ್ಟು ಜನಾಂಗ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷರಿಗೆ ಮೊಬೈಲ್‌ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಮಧ್ಯಪ್ರದೇಶದಲ್ಲಿ ವಂಚನೆ ಪ್ರಕರಣ ದಾಖಲಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.

ಮಧ್ಯಪ್ರದೇಶದ ಕಲೆಕ್ಟರ್‌ ಜಿಲ್ಲಾಧಿಕಾರಿಗೆ ಎಫ್‌ ಐಆರ್‌ ಪ್ರಕರಣ ದಾಖಲಿಸಿದ ದಾಖಲಾತಿ ನೀಡುವ ಮೂಲಕ ಎಲ್ಲರನ್ನು ಸುರಕ್ಷಿತವಾಗಿ ಮಧ್ಯಪ್ರದೇಶದ ಬೆಳವಂಡಿ ಜಿಲ್ಲೆಗೆ ತಲುಪಿಸಬೇಕೆಂಬ ಮಾಹಿತಿ ನೀಡಿದರು. ಇದರಿಂದ ಕಾರ್ಯಪ್ರವೃತ್ತರಾದ ಜಿಲ್ಲಾ ಧಿಕಾರಿಗಳು ಮುಧೋಳ ತಹಶೀಲ್ದಾರ್‌ ಮತ್ತು ಪಿಎಸೈ ಅವರೆಗೆ ನಿರ್ದೇಶನ ನೀಡಿ ಗ್ಯಾಂಗ್‌ಮನ್‌ ಠಾರೋಡ ಎಂಬಾತನನ್ನು ಬಂಧಿಸಿ ನ್ಯಾಯಾಲಯ ವಶಕ್ಕೆ ನೀಡಲಾಗಿದೆ. ಅಲ್ಲದೇ ಎಲ್ಲ ಕಾರ್ಮಿಕರನ್ನು ಸುರಕ್ಷಿತವಾಗಿ ಕಳುಹಿಸಿ ಕೊಡಬೇಕೆಂದು ಜಮಖಂಡಿ ಉಪವಿಭಾಗಾಧಿಕಾರಿ ಡಾ| ಸಿದ್ದು ಹುಲ್ಲೊಳ್ಳಿ ನಿರ್ದೇಶನ ನೀಡಿದ್ದರು.

ನಗರದ ಕುಡಚಿ ರಸ್ತೆಯಲ್ಲಿರುವ ತಾಲೂಕು ಆಡಳಿತ ಸೌಧದಲ್ಲಿ ವಾಸವಿದ್ದ ಮಧ್ಯಪ್ರದೇಶ ಕಾರ್ಮಿಕರಿಗೆ 4 ದಿನಗಳವರೆಗೆ ಉಪಹಾರ-ಊಟದ ವ್ಯವಸ್ಥೆ ಮಾಡಲಾಗಿತ್ತು.

Advertisement

ಉಪ ವಿಭಾಗಾಧಿ ಕಾರಿ ಡಾ| ಸಿದ್ದು ಹುಲ್ಲೋಳ್ಳಿ ನೇತೃತ್ವದಲ್ಲಿ ಬುಧವಾರ ಖಾಸಗಿ ವಾಹನದ ಮೂಲಕ ಸರಕು ಸಾಮಾನುಗಳೊಂದಿಗೆ ಕಬ್ಬು ಕಟಾವಿಗೆ ಬಂದಿದ್ದ ಎಲ್ಲ ಕಾರ್ಮಿಕರನ್ನು ಕಳುಹಿಸಿಕೊಡಲಾಯಿತು. ಮುಧೋಳ ಎಎಸೈ ಕೋಲಾರ, ಓರ್ವ ಮಹಿಳೆ ಮತ್ತು ಪುರುಷ ಆರಕ್ಷಕ, ಕಾರ್ಮಿಕ ಇಲಾಖೆ ಅಧಿಕಾರಿ, ಕಂದಾಯ ಇಲಾಖೆ ಅಧಿಕಾರಿ ಸೇರಿದಂತೆ 5 ಜನರ ತಂಡ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ನೀಡಿ ಅವರು ಕೂಡ ಮಧ್ಯಪ್ರದೇಶಕ್ಕೆ ತೆರಳಿದರು.

ಈ ಸಂದರ್ಭದಲ್ಲಿ ಮುಧೋಳ ತಹಶೀಲ್ದಾರ್‌ ಸಂಗಮೇಶ ಬಾಡಗಿ, ಶಿರಸ್ತೇದಾರ್‌ ನಿಂಗಪ್ಪ ಬಿರಡಿ, ಕಂದಾಯ ನಿರೀಕ್ಷಕ ಬಿ.ಎಸ್‌. ಜಿಗಳೂರ, ಚುನಾವಣೆ ಇಲಾಖೆ ಅ ಧಿಕಾರಿ ಸಂತೋಷ ರಬಕವಿ, ಮೋಹನ ಸಬರದ ಸೇರಿದಂತೆ ಇತರರಿದ್ದರು.

ಪತ್ರಕರ್ತರ ಸಹಕಾರ-ವ್ಯಾಪಾರಸ್ಥರ ದಾಸೋಹ
ನಗರದ ತಾಲೂಕು ಆಡಳಿತ ಸೌಧದ ಕೆಳ ಅಂತಸ್ತಿನಲ್ಲಿ ಮಧ್ಯಪ್ರದೇಶದ ಚಿಕ್ಕಮಕ್ಕಳ ಸಹಿತ 25 ಜನ ಕಬ್ಬು ಕಟಾವು ಮಾಡುವ ಕಾರ್ಮಿಕರು ಕಳೆದ 5 ದಿನದಿಂದ ವಾಸವಾಗಿದ್ದು, 4 ದಿನದವರೆಗೆ ತಾಲೂಕು ಆಡಳಿತದಿಂದ ಊಟದ ವ್ಯವಸ್ಥೆ ಮಾಡಿಲಾಗಿತ್ತು. ಮಂಗಳವಾರ ಕಾರ್ಮಿಕರಿಗೆ ಊಟದ ವ್ಯವಸ್ಥೆಯಲ್ಲಿ ತೊಂದರೆಯಾದ ಹಿನ್ನೆಲೆಯಲ್ಲಿ ಮಕ್ಕಳು ಹೊಟ್ಟೆ ಹಸಿವಿನಿಂದ ರೋದಿಸುತ್ತಿದ್ದರು. ಇದನ್ನು ಗಮನಿಸಿದ ಜಮಖಂಡಿ ನಗರದ ಕೆಲ ಪತ್ರಕರ್ತರು ದಾನಿಗಳ ಮೊರೆ ಹೋಗಿ ಸಮಸ್ಯೆ ತಿಳಿಸಿದಾಗ ಶಬ್ಬೀರ ಬಾಗವಾನ, ಮುನ್ನಾ ನದಾಫ್‌, ಮೀರಾ ಝಾರೆ, ಯಾಸೀನ್‌ ಸಪ್ತಸಾಗರ ಉಚಿತವಾಗಿ ಬಾಳೆ, ಚಿಕ್ಕು, ಸೇಬು ಹಣ್ಣು, ಭಜ್ಜಿ, ಮಸಾಲಾ ರೈಸ್‌ ನೀಡಿ ಮಾನವೀಯತೆ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next