Advertisement

ಸಾರಿಗೆ ಸಚಿವರ ಬಸ್‌ ಪ್ರಯಾಣ

12:14 PM Sep 05, 2017 | |

ಬೆಂಗಳೂರು: ಕಾರುಗಳಲ್ಲಿ ಒಬ್ಬೊಬ್ಬರೇ ಓಡಾಡುವ ಬದಲು ಸಾರ್ವಜನಿಕ ವಾಹನಗಳನ್ನು ಬಳಸಿದರೆ ಸಂಚಾರ ದಟ್ಟಣೆ ನಿವಾರಣೆ ಜತೆಗೆ ಇಂಧನ ಉಳಿತಾಯ ಹಾಗೂ ಪರಿಸರ ಮಾಲಿನ್ಯವೂ ಕೂಡ ಕಡಿಮೆಯಾಗಲಿದೆ ಎಂದು ನೂತನ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದ್ದಾರೆ.

Advertisement

ಸೋಮವಾರ ಬಸ್‌ ದಿನಾಚರಣೆ ಅಂಗವಾಗಿ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರಿಗೆ ಕೆಂಗುಲಾಬಿ ಜತೆಗೆ ಸಾರ್ವಜನಿಕ ಬಸ್‌ ಬಳಸುವಂತೆ ಬಿತ್ತಿಪತ್ರ ವಿತರಿಸಿದ ಸಚಿವ ಎಚ್‌.ಎಂ.ರೇವಣ್ಣ, ಖುದ್ದಾಗಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದರು.

ಹೆಬ್ಟಾಳದ ಮನೆಯಿಂದ ಲಾಲ್‌ಬಾಗ್‌ ವರೆಗೆ ಹಾಗೂ ಅಲ್ಲಿಂದ ವಿಧಾನಸೌಧದ ವರೆಗೆ ಬಸ್‌ನಲ್ಲೇ ಪ್ರಯಾಣಿಸಿದ ಸಚಿವ ರೇವಣ್ಣ, ಬೆಂಗಳೂರಿನ ವಾಹನಗಳ ದಟ್ಟಣೆ ಕಡಿಮೆಗೊಳಿಸಲು ಬಸ್‌ಗಳನ್ನು ಬಳಸುವುದು ಉತ್ತಮ. ಕಾರುಗಳಲ್ಲಿ ಒಬ್ಬೊಬ್ಬರೇ ಓಡಾಡುವುದರಿಂದ ಟ್ರಾಫಿಕ್‌ ಸಮಸ್ಯೆ ಜತೆಗೆ ಇಂಧನ ವ್ಯರ್ಥ, ಪರಿಸರ ಮಾಲಿನ್ಯ ಕೂಡ ಹೆಚ್ಚುತ್ತದೆ.  ಇದನ್ನು ಮನಗಂಡು ಎಲ್ಲರೂ ಬಸ್‌ಗಳನ್ನು ಹೆಚ್ಚಾಗಿ ಬಳಸಬೇಕು. ಅಗತ್ಯವಿದ್ದಾಗ ಮಾತ್ರ ಕಾರುಗಳಲ್ಲಿ ಓಡಾಡಬೇಕು ಎಂದು ಮನವಿ ಮಾಡಿದರು. ಬಿಎಂಟಿಸಿ ಅಧ್ಯಕ್ಷ ನಾಗರಾಜ್‌ ಯಾದವ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next