Advertisement

IPS Transfer: ಮತ್ತೆ ಐಪಿಎಸ್ ಅಧಿಕಾರಿಗಳ ವರ್ಗಾವಣೆ; ರಾಯಚೂರು, ಕೊಪ್ಪಳಕ್ಕೆ ಹೊಸ ಎಸ್.ಪಿ

01:03 PM Jul 04, 2024 | Team Udayavani |

ಬೆಂಗಳೂರು: ಬುಧವಾರವಷ್ಟೇ 25 ಐಪಿಎಸ್ (IPS) ಅಧಿಕಾರಿಗಳ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರವು, ಇದೀಗ ಮತ್ತೆ ನಾಲ್ಕು ಅಧಿಕಾರಿಗಳನ್ನು ವರ್ಗ ಮಾಡಿದೆ.

Advertisement

ಕರ್ನಾಟಕ ಲೋಕಾಯುಕ್ತ ಎಸ್ಐಟಿ ಎಸ್ ಪಿಯಾಗಿದ್ದ ಎಂ.ಪುಟ್ಟಮಾದಯ್ಯ ಅವರನ್ನು ರಾಯಚೂರು ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ಕೊಪ್ಪಳ ಎಸ್ಪಿ ಯಶೋಧಾ ಒಂಟಗೋಡಿ ಅವರನ್ನು ವರ್ಗಾವಣೆ ಮಾಡಿ, ಲೋಕಾಯುಕ್ತ ಎಸ್ ಪಿಯಾಗಿ ನೇಮಿಸಲಾಗಿದೆ.

ಕರ್ನಾಟಕ ಲೋಕಾಯುಕ್ತ ಅಧಿಕಾರಿಯಾಗಿದ್ದ ಡಾ. ರಾಮ್ ಅರಸಿದ್ದಿ ಅವರನ್ನು ಕೊಪ್ಪಳಕ್ಕೆ ನೂತನ ಎಸ್ಪಿ ಆಗಿ ವರ್ಗಾವಣೆ ಮಾಡಲಾಗಿದೆ.

ಲೋಕಾಯುಕ್ತ ಎಸ್ ಪಿಯಾಗಿದ್ದ ಸಂಜೀತ್ ವಿ.ಜೆ ಅವರನ್ನು ಈಶಾನ್ಯ ಡಿಸಿಪಿ ಆಗಿ ನೇಮಿಸಲಾಗಿದೆ.

Advertisement

ಸೀಮಾ-ಸುಮನ್ ವರ್ಗಾವಣೆ

10 ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಮೈಸೂರು ಹಾಗೂ ಹುಬ್ಬಳ್ಳಿ-  ಧಾರವಾಡ ನಗರ ಪೊಲೀಸ್‌ ಆಯುಕ್ತರು ಸೇರಿ ಒಟ್ಟು 25 ಐಪಿಎಸ್‌ ಅಧಿಕಾರಿಗಳನ್ನು ಬುಧವಾರ ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಗುಪ್ತಚರ  ದಳದಲ್ಲೂ ಬದಲಾವಣೆ ಮಾಡಿದೆ. ಅಲ್ಲದೆ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದ ವಿಶೇಷ ತನಿಖಾ ತಂಡದಲ್ಲಿರುವ ಇಬ್ಬರು ಅಧಿಕಾರಿಗಳ ಹುದ್ದೆಯಲ್ಲಿ ವರ್ಗಾವಣೆ ಮಾಡಿದ್ದು, ತನಿಖಾ ತಂಡದಲ್ಲಿ ಮುಂದುವರಿಸಿದೆ.

ಪ್ರಜ್ವಲ್‌ ಪ್ರಕರಣದ ಎಸ್‌ಐಟಿಯಲ್ಲಿದ್ದ ಮೈಸೂರು ಎಸ್‌ಪಿ ಸೀಮಾ ಲಾಟ್ಕರ್‌ ಅವರನ್ನು ಮೈಸೂರು ನಗರ ಪೊಲೀಸ್‌ ಆಯುಕ್ತೆಯಾಗಿ ವರ್ಗಾಯಿಸಿದ್ದು, ಬೆಂಗಳೂರು ಆಡಳಿತ ವಿಭಾಗದ ಎಐಜಿ ಡಾ.ಸುಮನ್‌ ಡಿ.ಪೆನ್ನೇಕರ್‌ ಅವರನ್ನು ಬಿಎಂಟಿಎಫ್ ಎಸ್‌ಪಿಯಾಗಿ ವರ್ಗಾಯಿಸಿದೆ. ಆದರೆ, ಎಸ್‌ಐಟಿಯಲ್ಲೇ ಮುಂದು ವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next