Advertisement

ಶಿರ್ವ ರಸ್ತೆಯಲ್ಲಿದ್ದ ವಿದ್ಯುತ್‌ ಕಂಬಗಳ ಸ್ಥಳಾಂತರ

07:40 AM Apr 13, 2018 | |

ಶಿರ್ವ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಬಳಿ ರಸ್ತೆಯಲ್ಲೇ ಇದ್ದ ವಿದ್ಯುತ್‌ ಕಂಬಗಳನ್ನು ಮೆಸ್ಕಾಂ ಕೊನೆಗೂ ಸ್ಥಳಾಂತರಗೊಳಿಸಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

Advertisement

ಮಂಚಕಲ್‌ಪೇಟೆಯ ಮುಖ್ಯ ರಸ್ತೆಯಲ್ಲಿ ರಾಜ್ಯ ಹೆದ್ದಾರಿ ರಸ್ತೆ ವಿಸ್ತರಣೆ ಕಾಮಗಾರಿ ಮುಗಿದು ತಿಂಗಳುಗಳೇ ಕಳೆದರೂ ವಿದ್ಯುತ್‌ ಕಂಬಗಳು ಹಾಗೇ ಇದ್ದವು.  ಯು.ಕೆ.ಆಚಾರ್‌ ಸರ್ಕಲ್‌ನಿಂದ ಪೋಸ್ಟ್‌ ಆಫೀಸ್‌ವರೆಗೆ ಹಲವು ಕಂಬಗಳು ರಸ್ತೆಯಲ್ಲೇ ಇದ್ದುದರಿಂದ ನಿತ್ಯ ಸಂಚರಿಸುವ ಸಾವಿರಾರು ವಾಹನಗಳಿಗೆ, ದ್ವಿಚಕ್ರ ಸವಾರರಿಗೆ ಅಪಾಯ ಆಹ್ವಾನಿಸುತ್ತಿದ್ದವು. ಕಂಬಗಳು ಸ್ಥಳಾಂತರ ಗೊಳ್ಳದೇ ಇರುವ ಬಗ್ಗೆ ಉದಯವಾಣಿ ಸಚಿತ್ರ ವರದಿ ಮಾಡಿ ಎಚ್ಚರಿಸಿದ್ದು, ಬಳಿಕ ಮೆಸ್ಕಾಂ ಎಚ್ಚೆತ್ತುಕೊಂಡಿದೆ. ಇದೀಗ ಕಂಬ ಗಳನ್ನು ಅದು ತೆರವುಗೊಳಿಸಿದ್ದು, ವಾಹನ ಸವಾರರು ಆತಂಕವಿಲ್ಲದೆ ಸಂಚರಿ ಸುವಂತಾಗಿದೆ.  
 

Advertisement

Udayavani is now on Telegram. Click here to join our channel and stay updated with the latest news.

Next