Advertisement

ಸೈಬರ್‌ ಕ್ರೈಂ ತಡೆಗೆ ತರಬೇತಿ ಶಾಲೆ ಆರಂಭ: ಪರಮೇಶ್ವರ್‌

06:35 AM Nov 18, 2018 | Team Udayavani |

ಬೆಳಗಾವಿ: ರಾಜ್ಯದಲ್ಲಿ ಸೈಬರ್‌ ಕ್ರೈಂ ಮೂಲಕ ನಡೆಯುತ್ತಿರುವ ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಲು ಬೆಂಗಳೂರಿನಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ಸೈಬರ್‌ ಕ್ರೈಂ ತರಬೇತಿ ಶಾಲೆ ಆರಂಭಿಸಲಾಗುತ್ತಿದ್ದು, ಎಲ್ಲ ಪೊಲೀಸ್‌ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ, ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ತಿಳಿಸಿದರು.

Advertisement

ಇಲ್ಲಿಯ ಕಂಗ್ರಾಳಿ ಕೆ.ಎಚ್‌. ಗ್ರಾಮದ ರಾಜ್ಯ ಮೀಸಲು ಪೊಲೀಸ್‌ ಪಡೆಯ 362 ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ
ಸಂಚಲನದಲ್ಲಿ ಶನಿವಾರ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಇನ್ಫೋಸಿಸ್‌ ಸಹಾಯದಿಂದ ಈ ತರಬೇತಿ ಶಾಲೆ ಆರಂಭಿಸಿ ಸೈಬರ್‌ ಕ್ರೈಂ ತಡೆಗಟ್ಟಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಸಮಾಜದಲ್ಲಿ ಶಾಂತಿ- ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಈಗಾಗಲೇ 1.06 ಲಕ್ಷ ಸಿಬ್ಬಂದಿ ಪೊಲೀಸ್‌ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು,ನಾಲ್ಕು ಸಾವಿರ ಸಿಬ್ಬಂದಿಯ ನೇಮಕ ಕಾರ್ಯ ನಡೆಯಲಿದೆ. ಇನ್ನೈದು ವರ್ಷಗಳಲ್ಲಿ 20 ಸಾವಿರ ಹುದ್ದೆಗಳ ನೇಮಕ ಪ್ರಕ್ರಿಯೆ ನಡೆಯಲಿದೆ.

ಪೊಲೀಸ್‌ ಸಿಬ್ಬಂದಿಗೆ ವಸತಿ ಸೌಕರ್ಯ ಕಲ್ಪಿಸುವ ಕಾರ್ಯ ನಡೆದಿದ್ದು, 11 ಸಾವಿರ ಮನೆಗಳು ನಿರ್ಮಾಣ ಹಂತದಲ್ಲಿವೆ. ಪೊಲೀಸ್‌-ಗೃಹ ಎಂಬ ಯೋಜನೆ ಮುಂದುವರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಪೊಲೀಸರು ದೇಶದಲ್ಲಿಯೇ ಪ್ರಖ್ಯಾತಿ ಪಡೆದಿದ್ದಾರೆ. ಎಂಥ ಕಷ್ಟ ಬಂದರೂ ಅದನ್ನು ಎದುರಿಸಲು ಸನ್ನದಟಛಿರಾಗಿದ್ದಾರೆ.

Advertisement

ಸಮಾಜದ ಹಿತ ಕಾಪಾಡಲು, ರಾಜ್ಯದ ನೆಲ-ಜಲ, ಜನರ ರಕ್ಷಣೆಗೆ ಸದಾ ಮುಂದಿದ್ದಾರೆ. ಕೆಎಸ್‌ಆರ್‌ಪಿ ತರಬೇತಿ ಪೂರ್ಣಗೊಳಿಸಿರುವ ಪ್ರಶಿಕ್ಷಣಾರ್ಥಿಗಳು ಶಾರೀರಿಕ, ಮಾನಸಿಕ ಹಾಗೂ ಆಧುನಿಕ ವಿದ್ಯಮಾನಗಳ ಬಗ್ಗೆ ತರಬೇತಿ ಪಡೆದುಕೊಂಡಿದ್ದು, ರಾಜ್ಯಕ್ಕೆ ತಮ್ಮನ್ನು ತಾವು ಸಮರ್ಪಿಸಿಗೊಂಡಿದ್ದಾರೆ ಎಂದು ಹೇಳಿದರು.

ಡಾ| ಬಾಬಾಸಾಹೇಬ ಅಂಬೇಡ್ಕರರ ಆಶಯದಂತೆ ಜಾತೀಯತೆ, ಧರ್ಮ ಸಂಘರ್ಷ, ಅಪರಾಧ ಪ್ರಕರಣಗಳಿಗೆ ಮಟ್ಟ ಹಾಕಬೇಕಾಗಿದೆ. ಈ ಎಲ್ಲ ಪದರುಗಳನ್ನು ತೊಡೆದು ಹಾಕಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಎಲ್ಲರಿಗೂ ಸಮಾನತೆ ಸಿಗಬೇಕು ಎಂಬ ಸಂವಿಧಾನದ ಆಶಯ ಈಡೇರಿಲ್ಲ ಎಂಬುದು ಬೇಸರ ತಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಶಿಕ್ಷಣಾರ್ಥಿಗಳಲ್ಲಿ ಪದವೀಧರರೇ ಹೆಚ್ಚು: 362 ಜನ ಪ್ರಶಿಕ್ಷಣಾರ್ಥಿಗಳ ಪೈಕಿ 180ಕ್ಕೂ ಹೆಚ್ಚು ಜನ ಪದವೀಧರರಾಗಿದ್ದು, 15 ಜನ ಸ್ನಾತಕೋತ್ತರ ಪದವಿ, 13 ಜನ ಪದವಿ ಪೂರ್ವ, 20 ಡಿಪ್ಲೊಮಾ ಹಾಗೂ 13 ಜನ ಎಸ್ಸೆಸ್ಸೆಲ್ಸಿ ಶಿಕ್ಷಣ ಪಡೆದಿದ್ದಾರೆ. ಕೆಎಸ್‌ಆರ್‌ಪಿ
ಹುದ್ದೆಗೆ ಎಸ್ಸೆಸ್ಸೆಲ್ಸಿ ಅರ್ಹತೆ ಇದ್ದರೂ ಪದವಿ ಮಾಡಿದವರು ಬರುತ್ತಿದ್ದಾರೆ ಎಂದರೆ ಇಲಾಖೆಯ ಮಟ್ಟ ಹೆಚ್ಚಾಗುತ್ತ ಹೋಗುತ್ತಿದೆ. ರಾಜ್ಯ ಪೊಲೀಸ್‌ ಇಲಾಖೆಗೆ ಅನೇಕ ಸವಾಲುಗಳು ಬರುತ್ತಿದ್ದು, ಅದನ್ನು ಎದುರಿಸಲು ಸಿದ್ಧಗೊಳ್ಳಬೇಕು ಎಂದು ಡಾ| ಜಿ. ಪರಮೇಶ್ವರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next