Advertisement

ಉಳ್ಳಾಲ: ರೈಲು ಬಡಿದು ವ್ಯಕ್ತಿ ದಾರುಣ ಸಾವು  

10:22 AM Feb 22, 2017 | |

ಉಳ್ಳಾಲ: ತೊಕ್ಕೊಟ್ಟು ಓವರ್‌ ಬ್ರಿಡ್ಜ್ ಬಳಿ  ಬುಧವಾರ   ಬೆಳಗ್ಗೆ ರೈಲು ಬಡಿ ದು ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಉಳ್ಳಾಲ ಸುಂದರಿಭಾಗ್‌  ನಿವಾಸಿ ವೆಂಕಪ್ಪ ಪೂಜಾರಿ (54)ಸಾವನ್ನಪ್ಪಿದವರು . 

Advertisement

ಉಳ್ಳಾಲ ಧರ್ಮನಗರ ದವರಾಗಿದ್ದ ವೆಂಕಪ್ಪ  ಪೂಜಾರಿ ಕಳೆದ ಕೆಲವು ವರ್ಷಗಳಿಂ ದ ಸುಂದರಿಭಾಗ್‌ ಬಳಿ  ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಮೇಸ್ತ್ರಿ ಕೆಲಸ ಮಾಡುತ್ತಿದ್ದ  ಇವರು ಬೆಳಗ್ಗೆ ತೊಕ್ಕೊಟ್ಟು ಓವರ್‌ ಬ್ರಿಡ್ಜ್ ಬಳಿ ರೈಲ್ವೇ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರೈಲು ಬಡಿದು ಸ್ಥಳದಲ್ಲೆ ದಾರುಣವಾಗಿ  ಸಾವನ್ನಪ್ಪಿದ್ದಾರೆ. ಮೃತರು ಪತ್ನಿ,ಪುತ್ರ ಪುತ್ರಿಯನ್ನುಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಮತ್ತು ರೈಲ್ವೇ ಪೊಲೀಸರು ಆಗಮಿಸಿ ಸ್ಥಳ ಮಹಜರು ನಡೆದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next