Advertisement

ಬೆಳಗಾವಿ-ಬೆಂಗಳೂರು ನಡುವೆ ರೈಲು ಸೇವೆ

11:00 PM Jun 23, 2019 | Lakshmi GovindaRaj |

ಹುಬ್ಬಳ್ಳಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನೈಋತ್ಯ ರೈಲ್ವೆ ವ್ಯಾಪ್ತಿಯ ಹುಬ್ಬಳ್ಳಿ ಸೆಕ್ಷನ್‌ಗೆ ಭಾನುವಾರ ಭೇಟಿ ನೀಡಿ ರೈಲ್‌ ಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Advertisement

ಪ್ರಯಾಣಿಕರಿಗೆ ಸಮರ್ಪಕವಾಗಿ ಸೌಲಭ್ಯ ಒದಗಿಸಬೇಕು. ಬೆಳಗಾವಿ ನಿಲ್ದಾಣದ ಪ್ಲಾಟ್‌ಫಾರ್ಮ್ 1ರಲ್ಲಿ ಬೆಳಗಾವಿಯ ಸಿರಿವಂತ ಸಂಸ್ಕೃತಿ ಬಿಂಬಿಸುವ ರೈಲು ವಸ್ತು ಸಂಗ್ರಹಾಲಯ ನಿರ್ಮಿಸಬೇಕು. ಬೆಳಗಾವಿ ನಿಲ್ದಾಣದಲ್ಲಿ ದ್ವಿತೀಯ ಪ್ರವೇಶ ನಿರ್ಮಿಸಬೇಕು ಎಂದು ಸೂಚಿಸಿದರು.

ಸಾಮ್ರೆಯಲ್ಲಿ ಗೂಡ್ಸ್‌ ಶೆಡ್‌ ನಿರ್ಮಿಸಿದ ನಂತರ ಬೆಳಗಾವಿ ನಿಲ್ದಾಣದ ಗೂಡ್ಸ್‌ ಶೆಡ್‌ ನೆಲಸಮಗೊಳಿಸಲಾಗುವುದು. ಕೊಟ್ಟೂರ- ಹೊಸಪೇಟೆ ಹಾಗೂ ಅಳ್ನಾವರ- ಅಂಬೇವಾಡಿ ಮಾರ್ಗವನ್ನು ಸಂಚಾರಕ್ಕೆ ತ್ವರಿತವಾಗಿ ಮುಕ್ತಗೊಳಿಸಬೇಕು.

ಮುಂದಿನ ವಾರ ಬೆಳಗಾವಿ- ಬೆಂಗಳೂರು ಮಧ್ಯೆ ನೂತನ 14 ಕೋಚ್‌ಗಳ ರೈಲು ಸೇವೆ ಆರಂಭಿಸಬೇಕು. ಬೆಳಗಾವಿಯಿಂದ ರಾತ್ರಿ 9 ಗಂಟೆಗೆ ಹೊರಟು ಬೆಳಗ್ಗೆ 7 ಗಂಟೆಗೆ ಬೆಂಗಳೂರು ತಲುಪುವಂತಾಗಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next