Advertisement

ಡೆಹ್ರಾಡೂನ್‌: ಸೆಲ್ಫಿ ತೆಗೆದುಕೊಳ್ಳಲು ಹೋದವರ ಮೇಲೆ ಹರಿದ ರೈಲು

08:20 PM Jun 26, 2023 | Team Udayavani |

ಡೆಹ್ರಾಡೂನ್‌: ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೂರ್‌ಕೀ ನಗರದ ದೋಸ್ನಿ ರೈಲ್ವೆ ಬ್ರಿಡ್ಜ್ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಇಬ್ಬರು ಯುವಕರ ಮೇಲೆ ರೈಲು ಹರಿದಿದೆ.

Advertisement

ಸಿದ್ಧಾಥ್‌ ಸೈನಿ (19) ಹಾಗೂ ಶಿವಂ ಸೈನಿ (16) ಎಂಬ ಯುವಕರು ತಮ್ಮ ಕುಟುಂಬಗಳೊಂದಿಗೆ ಸೋಲಾನಿ ನದಿಯಲ್ಲಿ ಪೂಜೆಗೆಂದು ಆಗಮಿಸಿದ್ದರು. ಈ ವೇಳೆ ನದಿಯ ಸಮೀಪದಲ್ಲಿರುವ ರೈಲ್ವೆ ಬ್ರಿಡ್ಜ್ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ತೆರಳಿದ್ದಾರೆ. ಇದೇ ಸಮಯಕ್ಕೆ ನವದೆಹಲಿ-ಡೆಹ್ರಾಡೂನ್‌ ಶತಾಬ್ದಿ ಎಕ್ಸ್‌ಪ್ರೆಸ್‌ ಯುವಕರ ಮೇಲೆ ಹರಿದಿದೆ. ಮೃತದೇಹಗಳು ಛಿದ್ರವಾಗಿದ್ದು, ಪೋಷಕರಿಗೆ ಯುವಕರ ಮೃತದೇಹ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next