Advertisement

ಸುರತ್ಕಲ್: ತಡರಾತ್ರಿ ರೈಲಿನಡಿ ಸಿಲುಕಿ 13 ಎಮ್ಮೆಗಳು ಸಾವು!

01:47 PM Apr 01, 2021 | Team Udayavani |

ಸುರತ್ಕಲ್: ಸಂಚರಿಸುತ್ತಿದ್ದ ರೈಲಿನಡಿ ಸಿಲುಕಿ 13ಕ್ಕೂ ಹೆಚ್ಚು ಎಮ್ಮೆಗಳು ಸಾವನ್ನಪ್ಪಿದ ಘಟನೆ ಮಂಗಳೂರಿನ ಸುರತ್ಕಲ್ ಸಮೀಪದ ತೋಕೂರು ಬಳಿ ಬುಧವಾರ ತಡರಾತ್ರಿ ನಡೆದಿದೆ.

Advertisement

ಇದನ್ನೂ ಓದಿ:ಐಪಿಎಲ್ ನಿಂದ ಹಿಂದೆ ಸರಿದ ವೇಗಿ ಹ್ಯಾಜಲ್ ವುಡ್: ಕಾಲೆಳೆದ ನೆಟ್ಟಿಗರು

ಇವುಗಳೆಲ್ಲಾ ಬೀಡಾಡಿ ಎಮ್ಮೆಗಳಾಗಿದ್ದು, ಗುಂಪು ಗುಂಪಾಗಿ ಒಂದೆಡೆಯಿಂದ ಇನ್ನೊಂದು ಕಡೆಗೆ ತೆರಳುತ್ತಿದ್ದವು. ತಡರಾತ್ರಿ ರೈಲು ಟ್ರ್ಯಾಕ್ ಮೇಲೆ ಗುಂಪಾಗಿ ನಡೆದುಕೊಂಡು ಹೋಗುವ ವೇಳೆಗೆ ರೈಲು ಢಿಕ್ಕಿ ಹೊಡೆದಿರಬಹುದು ಎಂದು ಅಂದಾಜಿಸಲಾಗಿದೆ.

ರೈಲ್ವೇ ಇಲಾಖೆಯ ಸಹಕಾರದೊಂದಿಗೆ ಹಿಂದೂ ಸಂಘಟನೆಗಳು ಎಮ್ಮೆಗಳ ಸಮೂಹ ಸಂಸ್ಕಾರಕ್ಕೆ ಸಿದ್ದತೆ ನಡೆಸಿವೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next