Advertisement

ಸಿದ್ದಾಪುರ: ಅಡುಗೆ ವಿಚಾರದಲ್ಲಿ ತಾಯಿ, ತಂಗಿಯನ್ನೇ ಗುಂಡಿಟ್ಟು‌ ಕೊಂದ!

11:46 AM Oct 14, 2021 | Team Udayavani |

ಶಿರಸಿ: ಆ ಅಡುಗೆ ಯಾಕೆ‌ ಮಾಡಲಿಲ್ಲ ಎಂದು ಊಟದ ವಿಚಾರದಲ್ಲಿ ತಗಾದೆ ತೆಗೆದ ಮಗ ತಾಯಿ ಹಾಗೂ ತಂಗಿಯನ್ನೇ ನಾಡ ಬಂದೂಕಿನಿಂದ ಗುಂಡಿಟ್ಟು ಕೊಂದ ಘಟನೆ ಇಲ್ಲಿನ ಉಪ ವಿಭಾಗದ ವ್ಯಾಪ್ತಿಯ ಸಿದ್ದಾಪುರ ದೊಡ್ಮನೆಯ‌ ಸಮೀಪ ಕುಡೆಗೋಡಿನಲ್ಲಿ ನಡೆದಿದೆ.

Advertisement

ಕುಡಿದ‌ ಅಮಲಿನಲ್ಲಿ ಊಟಕ್ಕೆ ಬಂದ ಮಗ  ಮಂಜುನಾಥ ಹಸ್ಲರ್ (24) ತಾಯಿ ಪಾರ್ವತಿ ಹಸ್ಲರ್ (45) ಸಹೋದರಿ ಬಿಎ ಪದವಿ ಪಡೆದಿದ್ದ ರಮ್ಯಾ‌ ಹಸ್ಲರ್ (20 ) ಅವರನ್ನು ‌ಕೊಲೆ‌ ಮಾಡಿದ್ದಾನೆ. ಶಿರಸಿ ಪೊಲೀಸ್ ಉಪಾಧೀಕ್ಷಕ ರವಿ ನಾಯ್ಕ ಘಟನಾ ಸ್ಥಳಕ್ಕೆ ಭೇಟಿ‌ ನೀಡಿ ತನಿಖೆ ಕೈಗೊಂಡಿದ್ದಾರೆ.

ಆರೋಪಿ ಬಂಧನ ಆಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ಡಿವೈಎಸ್ ಪಿ ರವಿ ನಾಯ್ಕ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next