Advertisement

ರಾಯಚೂರು: ಲಾರಿ ಬೈಕ್ ನಡುವೆ ಢಿಕ್ಕಿ; ಬೈಕ್ ನಲ್ಲಿದ್ದ ಒಂದೇ ಕುಟುಂಬದ ಮೂವರ ಸಾವು

07:23 PM Aug 16, 2022 | Team Udayavani |

ಸಿರವಾರ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ವಾಹನದಲ್ಲಿದ್ದ ಒಂದೇ ಕುಟುಂಬದ ಮೂರು ಜನ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ( ಆ.16 ರಂದು)  ಬೆಳಿಗ್ಗೆ ತಾಲೂಕಿನ ಹೊಕ್ರಾಣಿ ಕ್ರಾಸ್ ಬಳಿ ರಾಯಚೂರು- ಮಾನ್ವಿ ಹೆದ್ದಾರಿ ನಡೆದಿದೆ.

Advertisement

ಮೃತರನ್ನು ಕಲ್ಲೂರು ಗ್ರಾಮದ ಬಸವರಾಜ ಮಾಸಳಿ (40) ಭೀಮವ್ವ ಮಾಸಳಿ (50) ಮೃತರ ಮಗ ನರೇಶ (8) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:  ರಾಯಚೂರು: ಬೊಲೆರೋ ವಾಹನ ಢಿಕ್ಕಿ; ಬೈಕ್ ಸವಾರ ಸಾವು,ಪತ್ನಿ ಗಂಭೀರ

ಮೃತರು ಕಲ್ಲೂರು ಗ್ರಾಮದಿಂದ ಕುರ್ಡಿ ಗ್ರಾಮದ ಕಡೆ ಹೊರಟ ವೇಳೆ ಎದುರಿಗೆ ಬಂದ ಬಂದ ಲಾರಿ ಬೈಕ್ ಗೆ ಢಿಕ್ಕಿ ಹೊಡೆದಿದೆ, ಇದರ ಪರಿಣಾಮವಾಗಿ ಮೂರು ಜನ ಮೃತಪಟ್ಟಿದ್ದಾರೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Advertisement

ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next