Advertisement

ಮೀನು ಹಿಡಿಯುತ್ತಿದ್ದ ವೇಳೆ ಕಾಲಿಗೆ ಬಲೆ ಸಿಲುಕಿ ಮೀನುಗಾರ ಸಾವು

09:59 PM Jul 15, 2021 | Team Udayavani |

ಮಂಗಳೂರು: ಇಲ್ಲಿನ ಅಳಿವೆ ಬಾಗಿ ನದಿ ಸಮೀಪ ಮೀನುಗಾರರೊಬ್ಬರು  ಗುರುವಾರ ಬಲೆ ಹರಡಿ ಮೀನು ಹಿಡಿಯುತ್ತಿದ್ದ ಸಂದರ್ಭ ಮುಳುಗಿ ಮೃತಪಟ್ಟಿದ್ದಾರೆ.

Advertisement

ಜಯ ಪುತ್ರನ್(55) ತೋಟಬೆಂಗ್ರೆ ನಿವಾಸಿ ಯಾಗಿದ್ದು ಮೀನು ಹಿಡಿಯುವ ಕಾಯಕ ಮಾಡುತ್ತಿದ್ದು.ಗುರುವಾರ ಭಾರೀ ಗಾಳಿ ಮಳೆ ಬಂದಾಗ  ಆಕಸ್ಮಿಕವಾಗಿ ಬಲೆ ಕೈ ಕಾಲಿಗೆ ಸಿಲುಕಿ  ಈಜಲಾಗದೆ ಮುಳುಗಿ ಮೃತಪಟ್ಟಿದ್ದಾರೆ.

ಮನೆಗೆ ಬಾರದೇ ಇದ್ದಾಗ  ಹುಡುಕಾಟ ನಡೆಸಿದಾಗ ಮೃತದೇಹ ಕಸಬ ಬೆಂಗ್ರೆ ಬಳಿ ಪತ್ತೆಯಾಯಿತು. ಪತ್ನಿ,ಪುತ್ರ,ಪುತ್ರಿಯನ್ನು ಹೊಂದಿದ್ದು ಕುಟುಂಬಕ್ಕೆ ಇವರೇ ಜೀವನಾಧಾರವಾಗಿದ್ದರು.

ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next