Advertisement

ರಾಮನಗರ: ಒಂದೇ ಕುಟುಂಬದ ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನ; ಮೂವರ ದುರಂತ ಅಂತ್ಯ

12:01 PM Dec 22, 2021 | Team Udayavani |

ರಾಮನಗರ: ಕೌಟುಂಬಿಕ ‌ಕಲಹ ಹಿನ್ನೆಲೆ  ಕೆರೆಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ‌ಯತ್ನ ಮಾಡಿದ್ದು. ಈ ಪೈಕಿ ಮೂವರು ಮೃತಪಟ್ಡಿದ್ದಾರೆ. ಒಬ್ಬ ಬಾಲಕಿ ಪ್ರಾಣಾಪಾಯದಿಂದ ಪಾರಾದ ಘಟನೆ ಮಾಗಡಿ ತಾಲೂಕಿನ ದಮ್ಮನಕಟ್ಟೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ.

Advertisement

ಸಿದ್ದಮ್ಮ(55),  ಆಕೆಯ ಮಗಳು ಸುಮಿತ್ರಾ(30) ಅಳಿಯ‌ ಹನುಮಂತ ರಾಜು(35) ಮೃತಪಟ್ಟವರು.

ಬದುಕುಳಿದ ಹನ್ನೊಂದು ವರ್ಷದ ಬಾಲಕಿ ಕೀರ್ತನಾ(11) ಸ್ಥಿತಿ ಗಂಭೀರವಾಗಿದ್ದು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆ ಇವರೆಲ್ಲ ಆತ್ಮಹತ್ಯೆಗೆ ನಿರ್ಧಿಸಿ  ಒಟ್ಟು ಐವರು ಕೆರೆ ಬಳಿ ಹೋಗಿದ್ದರು. ಮೃತ ಸುಮಿತ್ರಾಳ ಹತ್ತು ವರ್ಷದ ಮಗಳು ಚಂದನಾ ಬಂದು ಗ್ರಾಮಸ್ಥರಿಗೆ ತಿಳಿಸಿದ್ದಾಳೆ.

ಸ್ಥಳಕ್ಕೆ ಬಂದ ಗ್ರಾಮಸ್ಥರಿಂದ ಬಾಲಕಿ ಕೀರ್ತನಾ ರಕ್ಷಣೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Advertisement

Udayavani is now on Telegram. Click here to join our channel and stay updated with the latest news.

Next