Advertisement

ಹಾಸನ: ಮೀನು ಹಿಡಿಯಲು ಹೋದ ವೇಳೆ ತೆಪ್ಪ ಮಗುಚಿ ಇಬ್ಬರು ನೀರುಪಾಲು

06:02 PM Jul 16, 2022 | Team Udayavani |

ಹಾಸನ: ಮೀನು ಹಿಡಿಯಲು ಹೋದ ವೇಳೆ ತೆಪ್ಪ ಮಗುಚಿ ಇಬ್ಬರು ಜಲಸಮಾಧಿಯಾಗಿರುವ ಘಟನೆ ಹಾಸನ ತಾಲೂಕು, ದುದ್ದ ಹೋಬಳಿ ತಿಮ್ಲಾಪುರದಲ್ಲಿ ಶನಿವಾರ ಸಂಭವಿಸಿದೆ.

Advertisement

ಭಾರಿ ಮಳೆ ನಡುವೆ ಕೆರೆಯಲ್ಲಿ ಮೀನು ಹಿಡಿಯಲು ಮೂವರು ಹೋಗಿದ್ದರು. ಭಾರೀ ಗಾಳಿಯಿಂದಾಗಿ ತೆಪ್ಪ ಮಗುಚಿಕೊಂಡಾಗ ತಿಮ್ಲಾಪುರದ  ರಾಜಣ್ಣ(50) ಮತ್ತು ಕಿಶೋರ್(38) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮತ್ತೊಬ್ಬ ಈಜಿ ದಡ ಸೇರಿದ್ದಾರೆ.

ಕೆರೆಯಲ್ಲಿ ಮೀನು ಸಾಕಿದ್ದ ಕಿಶೋರ್ ಮೀನು ಹಿಡಿದು ಮಾರಾಟ ಮಾಡಲು ಸ್ನೇಹಿತರೊಂದಿಗೆ ಕೆರೆಗೆ ತೆಪ್ಪದಲ್ಲಿ ತೆರಳಿದ್ದರು.

ಕೆರೆಯಲ್ಲಿ ಕಾರ್ಯಾಚರಣೆ ನಡೆಸಿ ಕಿಶೋರ್ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ. ರಾಜಣ್ಣ ಅವರ  ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ದುದ್ದ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next