Advertisement

ಬಳ್ಳಾರಿ: ಲಾಕ್ ಡೌನ್ ಭಯದಲ್ಲಿ ಊರಿಗೆ ಹೊರಟಿದ್ದ ನಾಲ್ವರು ಭೀಕರ ರಸ್ತೆ ಅಪಘಾತದಲ್ಲಿ ಸಾವು

11:33 AM Apr 28, 2021 | Team Udayavani |

ಬಳ್ಳಾರಿ : ಲಾಕ್ ಡೌನ್ ಭಯದಲ್ಲಿ ಊರಿಗೆ ಹೊರಟಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಬಳಿ ನಡೆದಿದೆ.

Advertisement

ಲಾರಿ- ಕಾರು ಮುಖಾಮುಖಿಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬುಧವಾರ ನಸುಕಿನ ಜಾವ 1.45ರ ಸುಮಾರಿಗೆ  ಈ ಘಟನೆ ಸಂಭವಿಸಿದೆ.

ಮೃತರು ಚಿಂಚೋಳಿ ತಾಲೂಕಿನ ಚಿಮ್ಮಾ ಈದಲಾಯಿ ಮತ್ತು ಕೊರಡಂಪಳ್ಳಿ ಗ್ರಾಮದವರು.

ಇದನ್ನೂ ಓದಿ : ನಿಯಂತ್ರಣ ತಪ್ಪಿ ಕಾರು ಪಲ್ಟಿ: ಓರ್ವ ಸಾವು, ಇನ್ಸ್ ಪೆಕ್ಟರ್ ಗಂಭೀರ ಗಾಯ

ಕೋವಿಡ್ ಕರ್ಫ್ಯೂ ಜಾರಿಯಿಂದಾಗಿ ಬೆಂಗಳೂರಿನಿಂದ ಕಾರಿನಲ್ಲಿ ಬರುವಾಗ ಲಾರಿಗೆ ಕಾರ್ ಡಿಕ್ಕಿಯಾಗಿ ಈ ಅವಘಡ ನಡೆದಿದ್ದು,ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ (52),ಭೀಮರಾವ  (30), ಸುನೀಲ ಶಿವರಾಜ ಪಾಟೀಲ‌(30), ಕಾರಿನ ಚಾಲಕ  ರೇವಣಸಿದ್ದ (30 ) ಸಾವನ್ನಪ್ಪಿದ್ದಾರೆ.

Advertisement

ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next