Advertisement

ಆಲ್ದೂರು: ಅಪ್ಪನ ಜೊತೆ ಜಗಳ; ಜೋಕಾಲಿಯಲ್ಲೇ ನೇಣಿಗೆ ಶರಣಾದ 4ನೇ ತರಗತಿ ವಿದ್ಯಾರ್ಥಿ

04:24 PM Mar 12, 2022 | Team Udayavani |

ಆಲ್ದೂರು: ಅಪ್ಪನ ಜೊತೆ ಜಗಳವಾಡಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಜೋಕಾಲಿಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

Advertisement

ಚೇತನ್‌ (9)  ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಈತ ಆಲ್ದೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದ. ಗುರುವಾರ ತನ್ನ ಸ್ವಂತ ಊರು ಹಾವೇರಿ ಜಿಲ್ಲೆ ಶೇಷಗಿರಿ ಗ್ರಾಮಕ್ಕೆ ಜಾತ್ರೆಗಾಗಿ ಕುಟುಂಬದವರ ಜೊತೆ ತೆರಳಿದ್ದು ಶುಕ್ರವಾರ ತನ್ನ ಮನೆಯಲ್ಲಿ ತನ್ನ ಅಪ್ಪ ಗಣೇಶ್‌ ಅವರ ಜೊತೆ ಜಗಳ ಮಾಡಿಕೊಂಡಿದ್ದ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯಲ್ಲಿದ್ದ ಜೋಕಾಲಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚೇತನ್‌ ಅಪ್ಪ ಗಣೇಶ್‌ ಅಮ್ಮ ಶೋಭಾ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದು ತಮ್ಮ ಊರು ಹಾವೇರಿಯಿಂದ ಆಲ್ದೂರು ಸಮೀಪದ ಹೊಸಳ್ಳಿ ಗ್ರಾಮಕ್ಕೆ ಬಂದು ಇಲ್ಲಿ ಬಾಡಿಗೆ ಮನೆಯಲ್ಲಿ ತಮ್ಮಇಬ್ಬರು ಮಕ್ಕಳಾದ ಪುನೀತ್‌ ಹಾಗೂ ಚೇತನ್‌ ಜೊತೆ ವಾಸ ಮಾಡುತ್ತಿದ್ದರು.

ಶುಕ್ರವಾರ ಶೇಷಗಿರಿಯಲ್ಲಿ ಜಾತ್ರೆಯಿದ್ದು ಮೃತದೇಹವನ್ನುಊರ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ ಎಂದು ಮನೆಯಿಂದ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡುಹೋಗಿ ಮರಣೋತ್ತರ ಪರೀಕ್ಷೆ ನಡೆಸಿ ರುದ್ರಭೂಮಿಯಲ್ಲಿಅಂತ್ಯಕ್ರಿಯೆ ನಡೆಸಲಾಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next