Advertisement

Tragedy: ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ಮೂವರು ವಿದ್ಯಾರ್ಥಿಗಳು ಮೃತ್ಯು

10:10 PM Sep 25, 2024 | Team Udayavani |

ಚಿಕ್ಕಬಳ್ಳಾಪುರ: ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟ ದಾರುಣ ಘಟನೆ ಚಿಕ್ಕಬಳ್ಳಾಪುರದಿಂದ
ಅವಲಗುರ್ಕಿಗೆ ತೆರಳುವ ರಸ್ತೆಯ ಗೇರಹಳ್ಳಿ ಬಳಿ ಬುಧವಾರ(ಸೆ. ೨೫) ರಂದು ನಡೆದಿದೆ.

Advertisement

ಮೃತರನ್ನು ಅವಲಗುರ್ಕಿ ಗ್ರಾಮದ ವಿದ್ಯಾರ್ಥಿಗಳಾದ ನಿತೀನ್ ಗೌಡ ( 9), ನೀತಿನ್ (19) ಹಾಗೂ ವೈಭವಗೌಡ (16) ಎಂದು ಗುರುತಿಸಲಾಗಿದೆ.

ನೀತಿನ್ ಗೌಡ ಹಾಗೂ ನಿತೀನ್ ಇಬ್ಬರು ಚಿಕ್ಕಬಳ್ಳಾಪುರದ ಬಿಜಿಎಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ವೈಭವಗೌಡ ನಗರದ ಗುಡ್ ಶೆಪರ್ಡ್ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದರೆಂದು ತಿಳಿದು ಬಂದಿದೆ.

ಮನೆಗೆ ತೆರಳುವಾಗ ದುರಂತ:
ಮೂವರು ಚಿಕ್ಕಬಳ್ಳಾಪುರದಲ್ಲಿ ಟ್ಯೂಷನ್ ಮುಗಿಸಿಕೊಂಡು ಸ್ವಗ್ರಾಮಕ್ಕೆ ವಾಪಸ್ಸು ತೆರಳುವಾಗ ಯಮರಾಯನಂತೆ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಗೆ ಮೂವರು ತೆರಳುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟರೆ ಉಳಿದ ಒಬ್ಬರು ಆಸ್ಪತ್ರೆಗೆ ಸಾಗಿಸುವಾಗ ಅಸುನೀಗಿದ್ದಾರೆ. ಮೂವರು ಪೋಷಕರಿಗೆ ಕುಟುಂಬದಲ್ಲಿ ಒಬ್ಬನೇ ಮಗ ಇದ್ದರು. ಅಪಘಾತ ಸಂಬಂದ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ‌ ದೂರು ದಾಖಲಾಗಿದೆ.

ಪೋಷಕರ ಅಕ್ರಂದನ:
ಅಪಘಾತ ವಿಷಯ ಅವಲಗುರ್ಕಿ ಗ್ರಾಮಕ್ಕೆ ಬರ ಸಿಡಿಲನಂತೆ ಬಡಿದಿದೆ. ಇಡೀ ಗ್ರಾಮ ಅಪಘಾತದಿಂದ ಅಘಾತಗೊಂಡು ಸ್ಮಶಾನ ಮೌನಕ್ಕೆ ಜಾರಿದೆ. ವಿದ್ಯಾರ್ಥಿಗಳ ಸಾವಿನಿಂದ ಗ್ರಾಮದಲ್ಲಿ‌ ನಿರವ ಮೌನ ಆವರಿಸಿದೆ.

Advertisement

ಇದನ್ನೂ ಓದಿ: ಮಗಳನ್ನು ಮದುವೆ ಮಾಡಿಕೊಡುವಂತೆ ಯುವಕನಿಂದ ಒತ್ತಾಯ… ಒಪ್ಪದಕ್ಕೆ ಯುವತಿಯ ತಾಯಿಗೆ ಚೂರಿ ಇರಿತ

Advertisement

Udayavani is now on Telegram. Click here to join our channel and stay updated with the latest news.

Next