Advertisement

ಟ್ರಾಫಿಕ್‌ ಪೊಲೀಸ್‌ ರವೀಂದ್ರ ಶೆಟ್ಟಿ ಅವರಿಗೆ ಸಮ್ಮಾನ

03:45 AM Jul 05, 2017 | Team Udayavani |

ನಂತೂರು:  ಇಲ್ಲಿನ ಸರ್ಕಲ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆ ಗಳಿಸಿರುವ  ಟ್ರಾಫಿಕ್‌ ಪೊಲೀಸ್‌ ರವೀಂದ್ರ ಶೆಟ್ಟಿ ಅವರನ್ನು ಮಂಗಳವಾರ ಕರ್ತವ್ಯ ನಿರ್ವಹಣೆಯ ವೇಳೆಯೇ ಸಚಿವ ಯು.ಟಿ. ಖಾದರ್‌   ಸಮ್ಮಾನಿಸಿದರು. 

Advertisement

ಬಳಿಕ ಮಾತನಾಡಿದ ಸಚಿವರು, ತಮ್ಮ ಸೇವಾ ಪರತೆಯ ಮೂಲಕ ಜನರ ಮೆಚ್ಚುಗೆ ಗಳಿಸಿರುವ ರವೀಂದ್ರ ಶೆಟ್ಟಿ ಅವರನ್ನು ಸಾರ್ವಜನಿಕರೇ ಸಮ್ಮಾನಿಸಲು ತೀರ್ಮಾ ನಿಸಿರುವುದು  ಶ್ಲಾಘನೀಯ. ನಾವು ನಿಸ್ವಾರ್ಥದಿಂದ ಕೆಲಸ ಮಾಡಿದಾಗ ಅದಕ್ಕೆ ಯಾವುದಾದರೂ ರೂಪದಲ್ಲಿ ಫಲ ಸಿಗುತ್ತದೆ. ಇಂತಹ ಜನಸ್ನೇಹಿ ಪೊಲೀಸರಿಗೆ ಸರಕಾರದ ಪರವಾಗಿಯೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 

ಸೊಮೇಶ್ವರ ಗ್ರಾಮ ಪಂಚಾಯತ್‌ ಸದಸ್ಯ ದೀಪಕ್‌ ಪೂಜಾರಿ ಪಿಲಾರ್‌, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಸುರೇಶ್‌ ಭಟ್ನಗರ್‌, ಮೂಡ ಸದಸ್ಯ ಮುರಳಿ ಮನೋಹರ ಸಾಲ್ಯಾನ್‌, ಶಿವಪ್ರಸಾದ್‌ ಶೆಟ್ಟಿ, ಅರುಣ್‌ ಕಾಪಿಕಾಡ್‌ ಮೊದಲಾದವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next