Advertisement

ಕಟಪಾಡಿಯಲ್ಲಿ ಸದಾ ಟ್ರಾಫಿಕ್‌ ಜಾಮ್‌ ಕಿರಿಕಿರಿ

01:25 PM Apr 19, 2022 | Team Udayavani |

ಕಟಪಾಡಿ: ಅಕ್ಕಪಕ್ಕದ ಪ್ರಮುಖ ನಾಲ್ಕೂರುಗಳಿಗೆ ಸಂಪರ್ಕ ವನ್ನು ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಬಹುತೇಕ ಸಂದರ್ಭದಲ್ಲಿ ಹೆಚ್ಚಿದ ವಾಹನಗಳ ದಟ್ಟನೆಯಿಂದ ವಾಹನ ಸವಾರರಿಗೆ ಟ್ರಾಫಿಕ್‌ ಜಾಮ್‌ ಕಿರಿಕಿರಿ ಆಗುತ್ತಿದೆ.

Advertisement

ರಾ. ಹೆದ್ದಾರಿ 66ರ ಉಡುಪಿ- ಮಂಗಳೂರು (ಪೂರ್ವ ಪಾರ್ಶ್ವ), ಮಂಗಳೂರು-ಉಡುಪಿ ಪಶ್ಚಿಮ ಪಾರ್ಶ್ವ, ಇಕ್ಕೆಲಗಳಲ್ಲಿನ ಸರ್ವೀಸ್‌ ರಸ್ತೆಗಳು, ಶಿರ್ವ-ಕಟಪಾಡಿ, ಮಣಿಪುರ- ಕಟಪಾಡಿ, ಕೋಟೆ ಮಟ್ಟು-ಕಟಪಾಡಿ ಪ್ರದೇಶಗಳಿಂದ ಆಗಮಿಸುವ ವಾಹನ ಗಳು, ಜನಸಂಚಾರದಿಂದ ಕಟಪಾಡಿ ಜಂಕ್ಷನ್‌ ಟೆನ್ಷನ್‌ಮಯವಾಗಿದೆ.

ಕಟಪಾಡಿ ಜಂಕ್ಷನ್‌ಗೆ ಎಲ್ಲೆಡೆ ಯಿಂದಲೂ ವಾಹನಗಳು ಆಗಮಿಸುತ್ತವೆ. ಪರಿಸರದಲ್ಲಿ ಇರುವ ಸಭಾಭವನಗಳು, ಪ್ರಮುಖ ದೇವಾಲಯಗಳು, ಶಾಲಾ ಕಾಲೇಜುಗಳು, ಮಾರುಕಟ್ಟೆ, ವ್ಯಾಪಾರಿ ಗಳು, ಪ್ರಾರ್ಥನಾ ಮಂದಿರಗಳು ಜತೆಗೆ ಉದ್ಯೋಗ-ವ್ಯಾಪಾರಕ್ಕೆ ತೆರಳುವ ಸಾರ್ವಜನಿಕರು, ಪಾರ್ಕಿಂಗ್‌ ಅವ್ಯವಸ್ಥೆ ಗಳು ಎದ್ದು ಕಾಣುತ್ತಿವೆ.

ಬೆಳಗ್ಗಿನ ಸಮಯ, ಸಂಜೆಯ ವೇಳೆ, ಶುಭ ಸಮಾರಂಭಗಳ ಸಂದರ್ಭ ಕಟಪಾಡಿ ಜಂಕ್ಷನ್‌ ವಾಹನ ಸವಾರರಿಗೆ, ಪ್ರಯಾಣಿಕರಿಗೆ ಹೆಚ್ಚಿನ ಟೆನÒನ್‌ ಕೊಡುತ್ತದೆ. ಈ ವೇಳೆಯಲ್ಲಿ ಕಾನೂನು ಸುರಕ್ಷತೆ ಪಾಲನೆಯ ಪೊಲೀಸರೇ ವಾಹನಗಳ ಸುಗಮ ಸಂಚಾರ ಮತ್ತು ಜನರನ್ನು ಹೆದ್ದಾರಿ ದಾಟಿಸುವ ಕರ್ತವ್ಯವನ್ನು ರಾಷ್ಟ್ರೀಯ ಒ ವಿಜಯ ಆಚಾರ್ಯ ಕಟಪಾಡಿ ವಿಶೇಷ ದಿನಗಳಲ್ಲಿ ಹೆಚ್ಚುವ ವಾಹನಗಳ ದಟ್ಟನೆಯಿಂದ ಉಡುಪಿ, ಮಂಗಳೂರು ಮತ್ತು ಶಿರ್ವ ಭಾಗದ ವಾಹನಗಳು ಸುಮಾರು 3 ಕಿ.ಮೀ.ನಷ್ಟು ಉದ್ದಕ್ಕೂ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿಕೊಳ್ಳುವುದಿದೆ. ಇಂತಹ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿಗಳು ಟ್ರಾಫಿಕ್‌ ನಿಯಂತ್ರಣಕ್ಕಾಗಿ ಶಿರ್ವ ಭಾಗದಿಂದ ಹಾಗೂ ಕಟಪಾಡಿ ಪೇಟೆಯಿಂದ ಬರುವ ವಾಹನಗಳು ನೇರವಾಗಿ ಹೆದ್ದಾರಿಗೆ ಪ್ರವೇಶಿಸದಂತೆ ನಿರ್ಬಂಧಿಸುತ್ತಾರೆ. ಬಳಿಕ ವಾಹನಗಳು ಸರ್ವೀಸ್‌ ರಸ್ತೆಯನ್ನು ಬಳಸಿ ಪಾಂಗಾಳ-ಉದ್ಯಾವರದತ್ತ ಸಂಚರಿಸುವಂತೆ ಮಾಡುವ ಮೂಲಕ ವಾಹನ ದಟ್ಟನೆಯನ್ನು ತಹಬಂದಿಗೆ ತರಲಾಗುತ್ತದೆ. ಉಡುಪಿ ಕಡೆಯಿಂದ ಕಟಪಾಡಿ ಪೇಟೆಗೆ ತೆರಳುವವರೂ ಕೂಡ ದೂರದ ಪಾಂಗಾಳಕ್ಕೆ ಸುತ್ತು ಬಂದು ಕಟಪಾಡಿ ಪ್ರವೇಶಿಸಬೇಕಾದ ಅನಿವಾರ್ಯತೆ ಇಲ್ಲಿದೆ. ವಿಶೇಷ ದಿನಗಳಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್‌ ಜಾಮ್‌ ಹೆದ್ದಾರಿ ನಿರ್ಮಿಸುವ ಕಾಲದಿಂದಲೂ ನಿಭಾಯಿಸುತ್ತಾ ಬಂದಿದ್ದಾರೆ. ಕೆಲವೊಮ್ಮೆ 8-10ಕ್ಕೂ ಅಧಿಕ ಪೊಲೀಸರು ಟ್ರಾಫಿಕ್‌ ಕಂಟ್ರೋಲಿಂಗ್‌ ನಿಭಾಯಿಸುತ್ತಿದ್ದು, ಸಾರ್ವ ಜನಿಕರೂ ಕೈ ಜೋಡಿಸುವುದೂ ಇದೆ.

Advertisement

ವ್ಯಾಪಾರ, ವಹಿವಾಟು, ಸದಾ ಜನದಟ್ಟಣೆ, ವಾಹನ ದಟ್ಟನೆಯಿಂದ ಕೂಡಿದ ಕಟಪಾಡಿ ಹೆದ್ದಾರಿಯಲ್ಲಿ ‘ಯು’ ಟರ್ನ್ ಇಲ್ಲ. ಒಂದೋ ಉದ್ಯಾವರಕ್ಕೆ ತೆರಳಿ ‘ಯು’-ಟರ್ನ್ ಹೊಡೆದು ಬರಬೇಕು. ಮತ್ತೂಂದೆಡೆ ಪಾಂಗಾಳಕ್ಕೆ ತೆರಳಿ ಯು-ಟರ್ನ್ ಹೊಡೆದು ಬರಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಕಟಪಾಡಿ ಪೇಟೆ ಯಲ್ಲಿನ ಜಂಕ್ಷನನ್ನೇ ವಾಹನಗಳು, ಜನರು ಬಳಸಬೇಕಾದ ಅನಿವಾರ್ಯತೆ ಇದೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಮುತುವರ್ಜಿಯಿಂದ ಗಮನ ಹರಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಗಳ ಸುಗಮ ಸಂಚಾರಕ್ಕೆ ಸೂಕ್ತ ಅವಕಾಶವನ್ನು ಕಲ್ಪಿಸಬೇಕಿದೆ ಎಂದು ವಾಹನ ಸವಾರರು, ಸ್ಥಳೀಯರು, ಟೂರಿಸ್ಟ್‌ ವಾಹನದವರು, ಪಾದ ಚಾರಿಗಳು, ವ್ಯಾಪಾರಿಗಳು, ಸಾರ್ವ ಜನಿಕರು ಆಗ್ರಹಿಸಿದ್ದಾರೆ.

ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ

ಸ್ಥಳೀಯಾಡಳಿತದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಸಾಧ್ಯ. ಈ ಮೊದಲೇ ಸಮಸ್ಯೆ ನಿವಾರಣೆಗಾಗಿ ಹೆದ್ದಾರಿ ಇಲಾಖೆಯ ಗಮನಕ್ಕೆ ತರಲಾಗಿದೆ. ವಯೋವೃದ್ಧರು, ಶಾಲಾ ಮಕ್ಕಳು ಸರ್ವೀಸ್‌ ರಸ್ತೆ – ಪೂರ್ವ ಮತ್ತು ಪಶ್ಚಿಮ ಪಾರ್ಶ್ವಗಳ ರಾ.ಹೆದ್ದಾರಿಯನ್ನು ಬಳಸಿಕೊಂಡು ರಸ್ತೆಯನ್ನು ದಾಟ ಬೇಕಾದಂತಹ ಸಂಕಷ್ಟದ ಅನಿವಾರ್ಯ ಪರಿಸ್ಥಿತಿಯೂ ಇದೆ -ಇಂದಿರಾ ಎಸ್‌. ಆಚಾರ್ಯ, ಅಧ್ಯಕ್ಷರು, ಕಟಪಾಡಿ ಗ್ರಾ.ಪಂ.

ಪಾದಚಾರಿಗಳ ಸಹಿತ ವಾಹನಗಳಿಗೂ ಸಮಸ್ಯೆ

ಅಂಡರ್‌ಪಾಸ್‌-ಮೇಲ್ಸೇತುವೆ ನಿರ್ಮಾಣವೇ ಪರಿಣಾಮಕಾರಿ ಬಹುತೇಕ ಸಂದರ್ಭದಲ್ಲಿ ಪಾದಚಾರಿಗಳ ಸಹಿತ ವಾಹನಗಳೂ ಸಮಸ್ಯೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್‌ಗಳು ಸಮಸ್ಯೆ ಪರಿಹರಿಸಲು ಸೂಕ್ತ ಯೋಜನೆ ರೂಪಿಸಬೇಕಾಗಿದೆ. ಮಮತಾ ವೈ. ಶೆಟ್ಟಿ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕಟಪಾಡಿ ಗ್ರಾ.ಪಂ. ಕಟಪಾಡಿ

ಜಂಕ್ಷನ್‌ನಲ್ಲಿ ಸಮಸ್ಯೆ ನಿವಾರಣೆಗಾಗಿ ಅಂಡರ್‌ ಪಾಸ್‌ (ಕಿನ್ನಿಮೂಲ್ಕಿ ಮಾದರಿ) ಅಥವಾ ಮೇಲ್ಸೇತುವೆ (ಕಾಪು ಮಾದರಿ) ನಿರ್ಮಾಣವೇ ಪರಿಣಾಮಕಾರಿ. -ದಯಾನಂದ, ಎ.ಎಸ್.ಐ. , ಕಾಪು ಪೊಲೀಸ್‌ ಠಾಣೆ.

ವಿಜಯ ಆಚಾರ್ಯ ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next