Advertisement

ಇಂದಿನಿಂದ ಶಿರಾಡಿಘಾಟ್‌ ಸಂಚಾರ ಬಂದ್‌

06:15 AM Jan 20, 2018 | |

ಹಾಸನ: ಬೆಂಗಳೂರು -ಮಂಗಳೂರು ರಾಷ್ಟ್ರೀಯ ಹೆದ್ದಾರಿ -75ರ ಶಿರಾಡಿಘಾಟ್‌ನಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣದ 2ನೇ ಹಂತದ ಕಾಮಗಾರಿ ಶನಿವಾರದಿಂದ ಆರಂಭವಾಗಲಿದ್ದು, ಈ ಮಾರ್ಗದಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಮುಖ್ಯ ಎಂಜಿನಿಯರ್‌ ತಿಳಿಸಿದ್ದಾರೆ.

Advertisement

ಕಾಮಗಾರಿ ಜ.20ರಿಂದ ಆರಂಭಿಸಿ ಮೇ ಅಂತ್ಯದೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೂ
ರಸ್ತೆಯಲ್ಲಿ ವಾಹನಗಳ ಸಂಚಾರ ಬಂದ್‌ ಆಗುವ ಐದು ತಿಂಗಳ ಅವಧಿಯಲ್ಲಿ ವಾಹನ ಸಂಚಾರಕ್ಕೆ 7 ಪರ್ಯಾಯ ರಸ್ತೆಗಳನ್ನೂ ಗುರುತಿಸಲಾಗಿದೆ. 

ಮಂಗಳೂರು- ಬಿ.ಸಿ.ರೋಡ್‌ ಶಿರಾಡಿಘಾಟ್‌ – ಸಕಲೇಶಪುರ – ಹಾಸನ (168 ಕಿ.ಮೀ.) ನೇರ ಮಾರ್ಗದ ಬದಲಿಗೆ ಗುರುತಿಸಿರುವ ಏಳು ಪರ್ಯಾಯ ರಸ್ತೆಗಳಲ್ಲಿ ಎ ವರ್ಗದ ಮತ್ತು ಬಿ ವರ್ಗದ ವಾಹನಗಳ ಸಂಚಾರಕ್ಕೆ ರಸ್ತೆಗಳನ್ನು
ನಿಗದಿಪಡಿಸಲಾಗಿದೆ. ಎ ವರ್ಗದ ವಾಹನಗಳೆಂದರೆ ಬಸ್‌, ಕಾರು, ಜೀಪು, ವ್ಯಾನ್‌, ದ್ವಿಚಕ್ರ ವಾಹನಗಳು. ಬಿ ವರ್ಗದ
ವಾಹನಗಳೆಂದರೆ ವಾಣಿಜ್ಯ ಉದ್ದೇಶದ ಭಾರೀ ವಾಹನಗಳು, ಮಲ್ಟಿ ಆಕ್ಸಿಲ್‌ ಟ್ರಕ್‌, ಟ್ಯಾಂಕರ್, ರಾಜಹಂಸ ಬಸ್‌.

Advertisement

Udayavani is now on Telegram. Click here to join our channel and stay updated with the latest news.

Next