Advertisement
ಇಲ್ಲಿನ ಚಂದ್ರಹಾಸ ನೂರ್ತಾಡಿ ಅವರ ಕುಟುಂಬ ಸುಮಾರು ಕಾಲದಿಂದ ಸಾಗುವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಯುವಕರು ಉದ್ಯೋಗ ನಿಮಿತ್ತ ಪಟ್ಟಣ ಸೇರಿದ್ದಾರೆ. ಈ ಬಾರಿ ಕೋವಿಡ್ ಕಾರಣದಿಂದ ಯುವಕರೂ ಗದ್ದೆಗಿಳಿದು ಕೃಷಿಕಾರ್ಯದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಒಂದೆಡೆ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಬೇಸಾಯ ನಡೆಸಿದ್ದಾರೆ.
Related Articles
Advertisement
ಕೂಲಿಯಾಳುಗಳ ಸಮಸ್ಯೆಯಿಂದ ಬೇಸಾಯ ಕಷ್ಟಕರವಾಗಿದ್ದು, ಊರಿನ ಯುವಕರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಇಂತಹ ಮಾದರಿ ಕಾರ್ಯಕ್ಕೆ ಮುಂದಾಗಿರುವುದು ಇತರರಿಗೆ ಕೃಷಿಯಲ್ಲಿ ಆಸಕ್ತಿ ಮೂಡಿಸುವಂತಾಗಿದೆ.-ಚಂದ್ರಹಾಸ ನೂರ್ತಾಡಿ, ಗದ್ದೆ ಮಾಲಕರು