Advertisement

ಹೂ, ಹಣ್ಣು ಮಾರಾಟಕ್ಕೆ ವ್ಯಾಪಾರಸ್ಥರು ನಗರಕ್ಕೆ: ಬಿರುಸಿನ ಖರೀದಿ

12:47 PM Aug 22, 2019 | Team Udayavani |

ಮಹಾನಗರ: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಇಡೀ ನಗರದ ಜನ ಸಂಭ್ರಮದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ನಗರಾದ್ಯಂತ ತಯಾರಿ ಬಿರುಸಾಗಿದ್ದು, ಹೂ, ಹಣ್ಣು ವ್ಯಾಪಾರಸ್ಥರು ಈಗಾಗಲೇ ವ್ಯಾಪಾರಕ್ಕೆ ಬಿರುಸಿನ ಸಿದ್ಧತೆ ಮಾಡುತ್ತಿದ್ದಾರೆ.

Advertisement

ನಾಗರಪಂಚಮಿ, ವರಮಹಾಲಕ್ಷ್ಮೀ ಹಬ್ಬ ಕಳೆದು, ಇದೀಗ ಅಷ್ಟಮಿಗೆ ದಿನ ಗಣನೆ ಶುರುವಾಗಿದೆ. ಆ. 23ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಗೆಂದು ನಗರದ ದೇವಸ್ಥಾನ, ಸಂಘ-ಸಂಸ್ಥೆಗಳಲ್ಲಿ ವಿಶೇಷ ಸಿದ್ಧತೆಗಳು ನಡೆಯುತ್ತಿವೆ.

ಜಿಲ್ಲೆ ಮಾತ್ರವಲ್ಲದೆ, ಉತ್ತರ ಕರ್ನಾಟಕ ಜಿಲ್ಲೆಗಳಿಂದಲೂ ವ್ಯಾಪಾರಸ್ಥರು ನಗರಕ್ಕಾ ಗಮಿಸಿದ್ದು, ಬಿಜೈ, ಹಂಪನಕಟ್ಟೆ, ಕಂಕ ನಾಡಿ, ಸ್ಟೇಟ್ಬ್ಯಾಂಕ್‌, ರಥಬೀದಿ ಮುಂತಾದೆಡೆಗಳಲ್ಲಿ ಹೂ, ಹಣ್ಣು, ತರಕಾರಿ ಮಾರಾಟದಲ್ಲಿ ತೊಡಗಿದ್ದಾರೆ.

ಬುಧವಾರ ಕೊಳ್ಳುವವರ ಸಂಖ್ಯೆ ಕಡಿಮೆ ಇದ್ದರೂ ಶುಕ್ರವಾರ ಅಷ್ಟಮಿ ಆಚರಣೆ ಹಿನ್ನೆಲೆಯಲ್ಲಿ ಗುರುವಾರ ಸಂಜೆ ವೇಳೆಗೆ ವ್ಯಾಪಾರ ಬಿರುಸು ಪಡೆಯಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ತರಕಾರಿ ಬೆಲೆ ಏರಿಕೆ
ಘಾಟಿ ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರು, ಹಾಸನ, ಮೈಸೂರು ಕಡೆಯಿಂದ ನಗರಕ್ಕೆ ತರಕಾರಿ ತರಲು ಸಾಧ್ಯವಾಗದಿರುವುದರಿಂದ ತರಕಾರಿ ಬೆಲೆ ಏರಿಕೆಯಾಗಿದೆ. ಅಷ್ಟಮಿಯ ಅಡುಗೆಗೆ ತರಕಾರಿ ಬೆಲೆ ಒಂದಷ್ಟು ಶಾಕ್‌ ನೀಡಿದೆ. ಕೆಜಿಗೆ 100 ರೂ.ಗಳಿದ್ದ ಊರಿನ ಬೆಂಡೆಯ ಬೆಲೆ ಪ್ರಸ್ತುತ 240 ರೂ.ಆಗಿದೆ. 80 ರೂ.ಗಳಿದ್ದ ಹಾಗಲಕಾಯಿಗೆ 100 ರೂ., 50 ರೂ.ಗಳಿದ್ದ ಹೀರೆಕಾಯಿ ಬೆಲೆ 100 ರೂ.ಗಳಾಗಿವೆ. ಮಳೆಯಿಂದಾಗಿ ಬೆಳೆ ಹಾನಿಯಾದ ಹಿನ್ನೆಲೆಯಿಂದ ಬೆಲೆ ಏರಿಕೆ ಆಗಿದೆ ಎನ್ನುತ್ತಾರೆ ವ್ಯಾಪಾರಸ್ಥ ಡೇವಿಡ್‌. ತರಕಾರಿ ಬೆಲೆ ಏರಿಕೆಯಾದರೂ ಹಣ್ಣಿನ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ ಎಂದು ವ್ಯಾಪಾರಸ್ಥ ಬಶೀರ್‌ ತಿಳಿಸಿದ್ದಾರೆ.

Advertisement

ಮೂಡೆ
ಅಷ್ಟಮಿಗೆ ಮೂಡೆ ತಯಾರಿಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಮೂಡೆ ಖರೀದಿಸುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಅದಕ್ಕಾಗಿಯೇ ವ್ಯಾಪಾರಸ್ಥರು ಮೂಡೆ ಯನ್ನೂ ಮಾರಾಟಕ್ಕಿಟ್ಟಿದ್ದಾರೆ. ಪ್ರಸ್ತುತ ಮೂಡೆ ಖರೀ ದಿಗೆ ಜನ ಬರುತ್ತಿಲ್ಲ. ಗುರುವಾರ ಜನ ಖರೀದಿ ಮಾಡಬಹುದು ಎನ್ನುತ್ತಾರೆ ವ್ಯಾಪಾರಸ್ಥರು.

Advertisement

Udayavani is now on Telegram. Click here to join our channel and stay updated with the latest news.

Next