Advertisement

ಕಾಲುವೆಗೆ ಉರುಳಿದ ಟ್ರ್ಯಾಕ್ಟರ್: ಇಬ್ಬರ ಸಾವು, ಈಜಿ ದಡ ಸೇರಿದ ಓರ್ವ ರೈತ

09:59 AM Feb 04, 2020 | keerthan |

ಮಹಾಲಿಂಗಪುರ: ಇಲ್ಲಿಗೆ ಸಮೀಪದ ಮೂಗಳಖೋಡ ಮತ್ತು ಕುಳಲಿ ಗ್ರಾಮದ ಹತ್ತಿರ ಘಟಪ್ರಭಾ ಎಡದಂಡೆ ಕಾಲುವೆಗೆ ಟ್ರ್ಯಾಕ್ಟರ್ ಬಿದ್ದು ಇಬ್ಬರು ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಜರುಗಿದೆ.

Advertisement

ಕುಳಲಿ ಗ್ರಾಮದ ನಿವಾಸಿ ಶಿವರುದ್ರಪ್ಪ ತಿಪ್ಪಣ್ಣ ಪೋಳ (60), ಮೂಗಳಖೋಡ ಗ್ರಾಮದ ನಿವಾಸಿ ಪೈಗಂಬರ್ ಸೈದುಸಾಬ್ ಲಾಡ್ ಖಾನ್ (38) ಘಟನೆಯಲ್ಲಿ ಮೃತಪಟ್ಟವರು.

ಟ್ರಾಕ್ಟರ್ ನೊಂದಿಗೆ ಕಾಲುವೆಗೆ ಬಿದ್ದ ಓರ್ವ ರೈತ ಈಜಿ ದಡ ಸೇರಿದ್ದಾರೆ.

ಅಗ್ನಿ ಶಾಮಕ ದಳದ ತಂಡ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಮೃತ ದೇಹಗಳ ಪತ್ತೆಗಾಗಿ ಶೋಧಕಾರ್ಯ ಕಾರ್ಯ ಮುಂದುವರಿದಿದೆ. ಕಾಲುವೆಯಿಂದ ಟ್ರ್ಯಾಕ್ಟರ್ ಇಂಜಿನ್ ಹೊರ ತೆಗೆಯಲಾಗಿದೆ.

ಮಹಾಲಿಂಗಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ಎಸ್ ಐ ರಾಜು ಬೀಳಗಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next