Advertisement

ಅಕ್ರಮ ಮರಳು ಸಾಗಿಸುವ ಟ್ರಾಕ್ಟರ್ ಡಿಕ್ಕಿ ಶಾಲಾ ಬಾಲಕನಿಗೆ ಗಂಭೀರ ಗಾಯ

10:00 AM Nov 08, 2019 | sudhir |

ಗಂಗಾವತಿ: ಅಕ್ರಮ ಮರಳು ಸಾಗಿಸುವ ಟ್ರಾಕ್ಟರ್ ಗುದ್ದಿದ ಪರಿಣಾಮ ಶಾಲಾ ಬಾಲಕನೊರ್ವನ ತಲೆ ಎದೆ ಕಾಲಿಗೆ ತೀವ್ರವಾಗಿ ಗಾಯಗಳಾದ ಘಟನೆ ಢಣಾಪೂರದಲ್ಲಿ ಜರುಗಿದೆ.

Advertisement

ಮಾರುತಿ ತಂದೆ ನಿಂಗಪ್ಪ (11) ಎಂಬ ವಿದ್ಯಾರ್ಥಿ ಮಧ್ಯಾನ್ಹ ಊಟ ಬಿಡುವಿನ ವೇಳೆ ರಸ್ತೆಯಲ್ಲಿ ಸೈಕಲ್ ಮೇಲೆ ತೆರಳುವಾಗ ಹಿಂದಿನಿಂದ ಬಂದ ಮರಳು ತುಂಬಿದ ಟ್ರ್ಯಾಕ್ಟರ್ ಗುದ್ದಿದೆ. ಈ ಟ್ರಾಕ್ಟರ್ ಹೆಬ್ಬಾಳ ದಲ್ಲಿ ಅಕ್ರಮ ಮರಳು ಭರ್ತಿ ಮಾಡಿಕೊಂಡು ಗಂಗಾವತಿಗೆ ತೆರಳುತ್ತಿತ್ತು. ಇಲ್ಲಿ ಹಗಲು ರಾತ್ರಿ ಎನ್ನದೇ ತುಂಗಭದ್ರಾ ನದಿಯಿಂದ ಅಕ್ರಮ ಮರಳು ಸಾಗಿಸಲಾಗುತ್ತಿದೆ.ಇದರಿಂದ ಢಣಾಪೂರ, ಕಲ್ಗುಡಿ,ಹೆಬ್ಬಾಳ ಸೇರಿ ಸುತ್ತಲಿನ ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿದೆ. ಹಲವು ಭಾರಿ ಕಂದಾಯ, ಪೊಲೀಸ್ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

ಸಿಂಗನಗುಂಡು ಬಳಿ ಅಕ್ರಮ ಮರಳು ಸಂಗ್ರಹ: ತಾಲೂಕಿನ ಸಿಂಗನಗುಂಡು ಬಳಿ 100ಕ್ಕೂ ಅಧಿಕ ಟ್ರಿಪ್ ಮರಳು ಅಕ್ರಮವಾಗಿ ಗುಡ್ಡದ ಹತ್ತಿರ ಸಂಗ್ರಹ ಮಾಡಲಾಗಿದ್ದು ಕಂದಾಯ,ಅರಣ್ಯ ಇಲಾಖೆ ಅಧಿಕಾರಿಗಳು ನೋಡಿಯೂ ನಿರ್ಲಕ್ಷ್ಯ ವಹಿಸಿದ್ದಾರೆಂದು ರೈತರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next