Advertisement

ಟಿ.ಆರ್‌. ಸ್ವಾಮಿ ಅಮಾನತು? 

06:20 AM Oct 11, 2018 | Team Udayavani |

ಬೆಂಗಳೂರು: ಎಸಿಬಿ ದಾಳಿಗೊಳಗಾದ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌.ಸ್ವಾಮಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. 

Advertisement

ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತ ಅವರು ಟಿ.ಆರ್‌.ಸ್ವಾಮಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಆದೇಶದ ಪ್ರತಿ ಲಭ್ಯವಾಗಿಲ್ಲ. ಮತ್ತೂಂದೆಡೆ ಎಸಿಬಿ ದಾಳಿಗೆ ಒಳಗಾಗಿದ್ದ ಬಿಡಿಎ ಮುಖ್ಯ ಇಂಜಿನಿಯರ್‌ ಗೌಡಯ್ಯ ಅವರನ್ನು ಸೇವೆಯಿಂದ ಅಮಾನತು ಮಾಡುವ ಸಾಧ್ಯತೆಯಿದೆ. ಮೂಲತಃ ಅವರು ಲೋಕೋಪಯೋಗಿ ಇಲಾಖೆಯವರಾದ ಕಾರಣ ಅಲ್ಲಿಂದಲೇ ಅಮಾನತು ಆದೇಶ ಹೊರಡಿಸಬೇಕು. ಇಲ್ಲವೇ ಕ್ರಮ ಕೈಗೊಳ್ಳುವಂತೆ ಬಿಡಿಎಗೆ ಲೋಕೋಪ ಯೋಗಿ ಇಲಾಖೆ ಸೂಚಿಸಬೇಕು ಎಂದು ಹೇಳಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next