Advertisement

ಟೊಯೋಟಾ : ಕಾರ್ಮಿಕರೊಂದಿಗೆ ಸಚಿವರ ಚರ್ಚೆ

12:59 PM Feb 05, 2021 | Team Udayavani |

ರಾಮನಗರ: ಕಳೆದ 88 ದಿನಗಳಿಂದ ನಡೆಯುತ್ತಿರುವ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌ ಕಂಪನಿಯ ಕಾರ್ಮಿಕರ ಮುಷ್ಕರ ತಾರ್ಕಿಕ ಅಂತ್ಯ ಮುಟ್ಟುವ ಬೆಳವಣಿಗೆ ಗೋಚರಿಸುತ್ತಿದೆ.

Advertisement

ಅಮಾನತುಗೊಂಡಿರುವ 74 ಕಾರ್ಮಿಕರನ್ನು ಕೆಲಸಕ್ಕೆ ವಾಪಸ್‌ ಪಡೆಯಬೇಕು. ಕೆಲಸಕ್ಕೆ ಮರಳಲಿಚ್ಚಿಸುವ ಕಾರ್ಮಿಕರಿಂದ ಮುಚ್ಚ  ಳಕೆ ಬರೆಸಿಕೊಳ್ಳಬಾರದು ಎಂದು ಸರ್ಕಾರ ಸೂಚಿಸಿದೆ. ಈ ಬಗ್ಗೆ ಆಡಳಿತ ಮಂಡಳಿ ಫೆ.5ಕ್ಕೆ ತನ್ನ ಅಭಿಪ್ರಾಯ ತಿಳಿಸಲಿದೆ.

ಸಚಿವರ ಭೇಟಿ ನಂತರದ ನಿಲುವು ಬಹುತೇಕ ಕಾರ್ಮಿಕರ ಪರವಾಗಿದ್ದು, ಕಂಪನಿ ಸರ್ಕಾರದ ನಿಲುವು ಒಪ್ಪಿದರೆ ಸಮಸ್ಯೆಗೆ ಸುಖಾಂತ್ಯ ದೊರೆಯಲಿದೆ.

ಸುದೀರ್ಘ‌ ಚರ್ಚೆ: ಸಚಿವ ಎ.ಶಿವರಾಂ ಹೆಬ್ಟಾರ್‌, ಶಾಸಕ ಎ.ಮಂಜುನಾಥ್‌, ಜಿಲ್ಲಾಧಿಕಾರಿ ಎಂ.ಎಸ್‌. ಅರ್ಚನಾ, ಎಸ್ಪಿ ಗಿರೀಶ್‌, ಕಾರ್ಮಿಕ ಇಲಾಖೆ ಅಧಿಕಾರಿಗಳು ಟೊಯೋಟಾ ಕಂಪನಿಗೆ ಭೇಟಿ ನೀಡಿ ಕಾರ್ಮಿಕರ ಆರೋಪಗಳ ಸಂಬಂಧ ಪರಿಶೀಲಿಸಿದರು. ಬಳಿಕ ಆಡಳಿತ ಮಂಡಳಿ ಅಧಿಕಾರಿಗಳೊಂದಿಗೆ 2 ಗಂಟೆ ಕಾಲ ಚರ್ಚಿಸಿದರು. ಕಂಪನಿ ತನ್ನ ಸಮಸ್ಯೆ ಬಿಚ್ಚಿಟ್ಟಿದ್ದು,ಸಚಿವರು ಕೆಲವೊಂದು ಸಲಹೆ ನೀಡಿದ್ದಾರೆ. ಅಲ್ಲದೇ,ಮುಷ್ಕರ ತಾರ್ಕಿಕ ಅಂತ್ಯ ಕಾಣಲಿ ಎಂದು ಆಶಿಸಿದ್ದಾರೆ.

   ಇದನ್ನೂ ಓದಿ :ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮೀಸಲು ರದ್ದುಪಡಿಸಿ

Advertisement

ಆಡಳಿತ ಮಂಡಳಿಯೊಂದಗಿನ ಚರ್ಚೆ ನಂತರ ಬಿಡದಿ ಕೈಗಾರಿಕೆ ಸಂಘದ ಸಭಾಂಗಣದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಪ್ರಸನ್ನ ಮತ್ತು ಪದಾಧಿಕಾರಿಗಳೊಂದಿಗೆ ಸಚಿವರು ಚರ್ಚಿಸಿದರು. ಬಳಿಕ ಮುಷ್ಕರ ಸ್ಥಳಕ್ಕೆ ತೆರಳಿದರು. ಈ ವೇಳೆ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಸಚಿವ ಎ.ಶಿವರಾಂ ಹೆಬ್ಟಾರ್‌ ಹಾಗೂ ಶಾಸಕ ಎ.ಮಂಜುನಾಥ್‌, ಕಾರ್ಮಿಕರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ ಎಂದು ಸ್ಪಷ್ಟ ಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜ್‌, ಬಿಡದಿ ಪುರಸಭೆ, ಗ್ರಾಪಂ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next