Advertisement

ಪ್ರವಾಸೋದ್ಯಮ ನೀತಿಯಲ್ಲಿ ಕಂಬಳ : ಕೇಂದ್ರ ಸಚಿವರ ಭರವಸೆ

09:31 AM Nov 15, 2022 | Team Udayavani |

ಉಳ್ಳಾಲ : ಪ್ರವಾಸೋದ್ಯಮ ನೀತಿ ರೂಪಿಸುವಾಗ ಕರಾವಳಿ ಜನರ ಸಂಸ್ಕೃತಿಯ ಭಾಗವಾಗಿರುವ ಕಂಬಳ ಕ್ರೀಡೆಯನ್ನು ಪ್ರವಾಸೋದ್ಯಮದ ಒಂದು ಭಾಗವಾಗಿ ಸೇರಿಸಲು ಪ್ರಯತ್ನಿಸುತ್ತೇನೆ ಎಂದು ಭಾರತ ಸರಕಾರದ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಶ್ರೀಪಾದ ಯೆಸ್ಸೋ ನಾಯಕ್‌ ತಿಳಿಸಿದರು.

Advertisement

ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ನಿರ್ಮಾಣ ಹಂತದಲ್ಲಿರುವ ಕಂಬಳ ಗದ್ದೆಯ ಕಾಮಗಾರಿ ವೀಕ್ಷಿಸಿ ಶಾಸಕ ಯು.ಟಿ. ಖಾದರ್‌ ಅವರಿಂದ ಮಾಹಿತಿ ಪಡೆದು ಅವರು ಮಾತನಾಡಿದರು.

ಪ್ರವಾಸೋದ್ಯಮಕ್ಕೆ ಪೂರಕವಾಗಿ ಕಂಬಳ ಕ್ರೀಡೆಗೆ ಬೆಂಬಲ ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಾಸಕ ಖಾದರ್‌ ಅವರ ಮನವಿಗೆ ಸ್ಪಂದಿಸುವೆ ಎಂದರು.

ಅನುದಾನಕ್ಕೂ ಸಹಕಾರಿ
ಶಾಸಕ ಖಾದರ್‌ ಮಾತನಾಡಿ, ಕಂಬಳ ಕರೆ ನಿರ್ಮಾಣದೊಂದಿಗೆ ಈ ಭಾಗದಲ್ಲಿ ತುಳು ಗ್ರಾಮದ ಯೋಜನೆಯನ್ನು ರೂಪಿಸಿದ್ದು, ಮುಂದಿನ ದಿನಗಳಲ್ಲಿ ಈ ಪ್ರದೇಶ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಯೋಜನೆ ರೂಪಿಸಲಾಗಿದೆ. ಕಂಬಳ ಕ್ರೀಡೆಯನ್ನು ಪ್ರವಾಸೋದ್ಯಮದ ಪಟ್ಟಿಯಲ್ಲಿ ಸೇರಿಸಿದರೆ ಅನುದಾನ ಬಿಡುಗಡೆಗೂ ಸಹಕಾರಿಯಾಗಲಿದೆ ಎಂದರು.

ನರಿಂಗಾನ ಗ್ರಾ.ಪಂ. ಅಧ್ಯಕ್ಷೆ ಶೈಲಜಾ ಜೆ. ಶೆಟ್ಟಿ, ಉಪಾಧ್ಯಕ್ಷ ನವಾಝ್ ನರಿಂಗಾನ, ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್‌ ಮೋನು, ಹರೇಕಳ ಗ್ರಾ.ಪಂ. ಅಧ್ಯಕ್ಷ ಬದ್ರುದ್ದಿನ್‌ ಫರೀದ್‌ನಗರ, ಮೊದಲಾದವರಿದ್ದರು.

Advertisement

ಇದನ್ನೂ ಓದಿ :ನಿಯಂತ್ರಣ ತಪ್ಪಿ ಕಡಲ ತೀರಕ್ಕೆ ಬಂದು ಅಪ್ಪಳಿಸಿದ ಮೀನುಗಾರಿಕಾ ಬೋಟ್; ತಪ್ಪಿದ ಭಾರೀ ಅನಾಹುತ 

Advertisement

Udayavani is now on Telegram. Click here to join our channel and stay updated with the latest news.

Next