Advertisement

ಆಹಾರ ಅರಸಿ ರಸ್ತೆಗೆ ಬಂದ ಮೊಸಳೆ ಮೇಲೆ ಹರಿದ ಲಾರಿ!

06:45 AM Oct 09, 2018 | Team Udayavani |

ಯಾದಗಿರಿ: ಕೃಷ್ಣಾ ನದಿಯಲ್ಲಿನ ಮೊಸಳೆಯೊಂದು ಆಹಾರ ಅರಸಿ ಭಾನುವಾರ ರಾತ್ರಿ ರಸ್ತೆಗೆ ಬಂದು ಪ್ರಾಣ ಕಳೆದುಕೊಂಡಿದೆ.

Advertisement

ವಡಗೇರಾ ತಾಲೂಕಿನ ಕದರಾಪೂರ ಗ್ರಾಮದ ನದಿಯ ಬ್ರಿಡ್ಜ್ ಕಂ.ಬ್ಯಾರೇಜ್‌ ಮೇಲೆ ಆಹಾರ ಅರಸಿ ಬಂದಾಗ ಲಾರಿಯೊಂದು
ಮೊಸಳೆ ಮೇಲೆ ಚಲಿಸಿದ್ದರಿಂದ ಸ್ಥಳದಲ್ಲಿಯೇ ಮೊಸಳೆ ಸಾವನ್ನಪ್ಪಿದೆ. ನದಿಯಲ್ಲಿ ಸಾಕಷ್ಟು ಮೊಸಳೆಗಳಿದ್ದು, ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಹೊಲ ಗದ್ದೆಗಳಲ್ಲಿ ಪ್ರತ್ಯಕ್ಷವಾಗಿ ಹಸು, ಕುರಿಗಳನ್ನು ತಿನ್ನುತ್ತಿದ್ದು, ಇದರಿಂದ ರೈತರಲ್ಲಿ ಆತಂಕ ಸೃಷ್ಟಿಸಿದೆ. ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ಅ ಧಿಕಾರಿಗಳಗಮನಕ್ಕೆ ತಂದರೂ ಕಾಳಜಿ ವಹಿಸುತ್ತಿಲ್ಲ ಎಂದು ರಾಜ್ಯ ರೈತ ಸಂಘದ ಪ್ರದಾನ ಕಾರ್ಯದರ್ಶಿ ನಿಂಗಣ್ಣ ಜಡಿ ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next