Advertisement

ಕೇರಳ : ಮುಂದುವರಿದ ಮಳೆ ಅಬ್ಬರ, ಓಣಂ ಹಣ ಮಳೆ ಸಂತ್ರಸ್ತರಿಗೆ

05:53 PM Aug 14, 2018 | udayavani editorial |

ತಿರುವನಂತಪುರ : ಈ ವರೆಗೆ 39 ಜೀವಗಳನ್ನು ಬಲಿಪಡೆದಿರುವ ಕೇರಳದ ಜಡಿ ಮಳೆ ಇಂದು ಮಂಗಳವಾರವೂ ತನ್ನ ಅಬ್ಬರವನ್ನು ಮುಂದುವರಿಸಿದ್ದು ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. 

Advertisement

ಮಳೆ, ಪ್ರವಾಹ, ಭೂಕುಸಿತ, ವ್ಯಾಪಕ ನಾಶ ನಷ್ಟ , ಜೀವ ಹಾನಿಯಿಂದ ಕಂಗೆಟ್ಟಿರುವ ಕೇರಳ ಸರಕಾರ ಈಗಿನ್ನು ಓಣಂ ಹಬ್ಬಕ್ಕೆಂದು ತೆಗೆದಿಟ್ಟಿದ್ದ ಹಣವನ್ನು ಕೂಡ ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ. ಹಾಗಾಗಿ ಈ ಬಾರಿಯ ಓಣಂ ಅತ್ಯಂತ ಸರಳವಾಗಿ ನಡೆಯುವದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಇಂದಿಲ್ಲಿ ಸುದ್ದಿಗಾರರಿಗೆ ಹೇಳಿದರು. 

ಇದೇ ವೇಳೆ ರಾಜ್ಯಪಾಲ ಪಿ ಸದಾಶಿವಂ ಅವರು ಕೂಡ ನಾಳೆ ಆ.15ರಂದು ಸ್ವಾತಂತ್ರ್ಯ ದಿನದ ಪ್ರಯುಕ್ತ ತಾವು ಏರ್ಪಡಿಸಲಿದ್ದ ಸತ್ಕಾರ ಕೂಟವನ್ನು ಕೂಡ ರದ್ದು ಪಡಿಸಿದ್ದಾರೆ. 

ಕೇರಳದ ಎರಡು ಪ್ರಮುಖ ಪ್ರವಾಸೀ ತಾಣಗಳಾಗಿರುವ ಇಡುಕ್ಕಿ ಮತ್ತು ವಯನಾಡ್‌ನ‌ಲ್ಲಿ ಇಂದು ಕೂಡ ಅಬ್ಬರದ ಮಳೆ ಮುಂದುವರಿದಿದೆ. ಪರಿಣಾಮವಾಗಿ ರಾಜ್ಯದ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. 

Advertisement

Udayavani is now on Telegram. Click here to join our channel and stay updated with the latest news.

Next