Advertisement

ಪಾದದ ಮೇಲೆ ಹರಿದ ಬಸ್‌

09:53 AM Jan 05, 2019 | |

ಮುದ್ದೇಬಿಹಾಳ: ಇಲ್ಲಿನ ಬಸ್‌ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆಗೆ ಹೊರಟಿದ್ದ ಯರಝರಿ ಗ್ರಾಮದ ಲಕ್ಷ್ಮಣ ಗುರಿಕಾರ ಎಂಬಾತನ ಬಲಪಾದದ ಮೇಲೆ ತಾಳಿಕೋಟೆ ಘಟಕದ ತಾಳಿಕೋಟೆ-ಬೆಳಗಾವಿ-ವಾಸ್ಕೋ ಮಾರ್ಗದ ಬಸ್‌ನ ಚಕ್ರಗಳು ಹರಿದು ಪಾದಕ್ಕೆ ಗಂಭೀರ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ಲಕ್ಷ್ಮಣ ತಮ್ಮೂರು ಯರಝರಿ ಗ್ರಾಮದಿಂದ ಬಸ್‌ ಮೂಲಕ ಬಂದು ಇಳಿದು ನಂತರ ನಿಲ್ದಾಣದ ಮೂಲೆಯಲ್ಲಿರುವ ಸಾರ್ವಜನಿಕ ಮೂತ್ರಾಲಯಕ್ಕೆ ಮೂತ್ರ ಮಾಡಲು ಹೋಗುವಾಗ ಮುಖ್ಯ ರಸ್ತೆಯಿಂದ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದ ಬಸ್‌ನ ಚಕ್ರಗಳು ಆತನ ಪಾದದ ಮೇಲೆ ಹರಿದು ದುರಂತ ಸಂಭವಿಸಿದೆ. ಪ್ರಯಾಣಿಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next