Advertisement

ಟೂಲ್‌ಕಿಟ್ ಪ್ರಕರಣ :‌ ಮಾ.15ರವರೆಗೆ ನಿಕಿತಾ, ಶಂತನು ಬಂಧನವಿಲ್ಲ

09:40 PM Mar 09, 2021 | Team Udayavani |

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ರೈತ ಹೋರಾಟದ ಟೂಲ್‌ಕಿಟ್‌ ಹಂಚಿಕೊಂಡ ಪ್ರಕರಣದಲ್ಲಿ; ದೇಶದ್ರೋಹದ ಆರೋಪ ಎದುರಿಸುತ್ತಿರುವ ನಿಕಿತಾ ಜೇಕಬ್‌, ಶಂತನು ಮುಲುಕ್‌ರನ್ನು ಮಾ.15ರವರೆಗೆ ಬಂಧಿಸದಂತೆ ಸ್ಥಳೀಯ ನ್ಯಾಯಾಲಯವೊಂದು ಪೊಲೀಸರಿಗೆ ಸೂಚಿಸಿದೆ.

Advertisement

ಇದೇ ಪ್ರಕರಣದಲ್ಲಿ ದಿಶಾ ರವಿ ಈಗಾಗಲೇ ಸರ್ವೋಚ್ಚ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ದೆಹಲಿ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಆರೋಪಗಳಿಗೆ ಉತ್ತರಿಸಲು ತಮಗೆ ಇನ್ನಷ್ಟು ಸಮಯಾವಕಾಶ ಬೇಕೆಂದು ಶಂತನು, ನಿಕಿತಾ ಕೇಳಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯ ಮೇಲಿನಂತೆ ಆದೇಶ ನೀಡಿದೆ. ಮುಂದಿನ ವಿಚಾರಣೆ ನಂತರ ಮುಂದೇನು ಮಾಡಬೇಕೆಂದು ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ :ಭಾರತದ ಕೊವ್ಯಾಕ್ಸಿನ್‌ ಲಸಿಕೆ ಸುರಕ್ಷಿತ : ಲ್ಯಾನ್ಸೆಟ್‌ ವರದಿ

Advertisement

Udayavani is now on Telegram. Click here to join our channel and stay updated with the latest news.

Next